– ಕಾಂಗ್ರೆಸ್ ಬೆಂಬಲಿತ ಯುಡಿಎಫ್ಗೆ ನಿರಾಸೆ
ನವದೆಹಲಿ: ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್ ವಿಜಯದ ಪತಾಕೆ ಹಾರಿಸಿದ್ದು, ಮತ್ತೊಮ್ಮೆ ಸಿಎಂ ಸ್ಥಾನ ಅಲಂಕರಿಸೋದು ಪಕ್ಕಾ ಆಗಿದೆ. ಚುನಾವಣೋತ್ತರ ಸಮೀಕ್ಷೆಗಳು ಪಿಣರಾಯಿ ವಿಜಯನ್ ಗೆಲುವನ್ನೇ ಹೇಳಿತ್ತು.
ಪಶ್ಚಿಮ ಬಂಗಾಳದಲ್ಲಿ ಎಲ್ಡಿಎಫ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಇಲ್ಲಿ ಅದರ ವಿರುದ್ಧವೇ ರಣರಂಗಕ್ಕೆ ಇಳಿದಿತ್ತು. ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಸಾಲು ಸಾಲು ಸಮಾವೇಶಗಳಲ್ಲಿ ತೊಡಗಿಕೊಂಡಿದ್ದರು. ರಾಹುಲ್ ಗಾಂಧಿ ಕೇರಳದ ಜನಪ್ರತಿನಿಧಿ ಆಗಿದ್ದರಿಂದ ಕಾಂಗ್ರೆಸ್ ಗೆಲುವಿನ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿದ್ದವು.
ಯಾರಿಗೆ ಎಷ್ಟು ಕ್ಷೇತ್ರ?: ಕೇರಳ ಒಟ್ಟು ವಿಧಾನಸಭಾ ಕ್ಷೇತ್ರಗಳು – 140
* ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ
ಎಲ್ಡಿಎಫ್: 104-120
ಯುಡಿಎಫ್+ಕಾಂಗ್ರೆಸ್: 20-36
ಬಿಜೆಪಿ: 0-2
ಇತರೆ: 0-2
* ಟೈಮ್ಸ್ ನೌ-ಸಿ ವೋಟರ್
ಎಲ್ಡಿಎಫ್: 74
ಯುಡಿಎಫ್+ಕಾಂಗ್ರೆಸ್: 65
ಬಿಜೆಪಿ: 1
ಇತರೆ: 0
* ಟುಡೇಸ್ ಚಾಣಕ್ಯ
ಎಲ್ಡಿಎಫ್: 93-111
ಯುಡಿಎಫ್+ಕಾಂಗ್ರೆಸ್: 26-44
ಬಿಜೆಪಿ: 0-6
ಇತರೆ: 0-3
* ಸಿಎನ್ಎಕ್ಸ್
ಎಲ್ಡಿಎಫ್: 72-80
ಯುಡಿಎಫ್+ಕಾಂಗ್ರೆಸ್: 58-64
ಬಿಜೆಪಿ: 1-5
ಇತರೆ: 0
ಕೇರಳದಲ್ಲಿ ನೆಲೆ ಇಲ್ಲದ ಬಿಜೆಪಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಆದ್ರೆ ಒಂದಂಕಿ ಸಾಧನೆ ಮಾತ್ರ ಆಗಿದೆ. ಕೊರೊನಾ ಸಮಯದಲ್ಲಿ ನಿರ್ವಹಣೆ ಪಿಣರಾಯಿ ವಿಜಯನ್ ಪ್ಲಸ್ ಪಾಯಿಂಟ್ ಅಂತ ವಿಮರ್ಶಕರು ಒತ್ತಿ ಒತ್ತಿ ಹೇಳಿದ್ದಾರೆ. ಇತ್ತ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರನ್ನ ಬಿಜೆಪಿ ಕರೆ ತಂದಿತ್ತು. ಇ.ಶ್ರೀಧರನ್ ಅವರೇ ಬಿಜೆಪಿಯ ಸಿಎಂ ಅಭ್ಯರ್ಥಿ ಅಂತ ಇಡೀ ಚುನಾವಣೆಯಲ್ಲಿ ಬಿಂಬಿತವಾಗಿತ್ತು. ಇತ್ತ ನಮ್ಮ ರಾಜ್ಯದ ಸಚಿವರು ಸಹ ಕೇರಳದಲ್ಲಿ ಕ್ಯಾಂಪೇನ್ ಗಳಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಅಸ್ಸಾಂ ಚಹಾ ತೋಟದಲ್ಲಿ ಎರಡನೇ ಬಾರಿ ಅರಳಿದ ಕಮಲ
2016ರ ಫಲಿತಾಂಶ: 2016ರಲ್ಲಿ ಪಿಣರಾಯಿ ಸರ್ಕಾರ 91ರ ಶಾಸಕರೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆಡಳಿತ ವಿರೋಧ ಅಲೆಯ ನಡುವೆಯೂ ಎಲ್ಡಿಎಫ್ ಮತ್ತಷ್ಟು ಕ್ಷೇತ್ರ ಗೆದ್ದು ಸರ್ಕಾರ ರಚನೆ ಮಾಡಲಿದೆ ಚುನಾವಣೋತ್ತರ ಸಮೀಕ್ಷೆ ಹೇಳಿದೆ. 2016ರಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ 47 ಸೀಟ್ ಗೆದ್ದಿತ್ತು. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿತ್ತು. ಕೇರಳದ ಜನ ಸಿಎಂ ವಿಜಯನ್ ಅವರನ್ನ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತಾರೆ. ಮಾಜಿ ಸಿಎಂ ಉಮ್ಮನ್ ಚಾಂಡಿ ಎರಡನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ
ಇದನ್ನೂ ಓದಿ: ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ