ಕೇಂದ್ರ ಸರ್ಕಾರ ಬಿರುಗಾಳಿಯಲ್ಲಿ ಸಿಲುಕಿ ದಾರಿತಪ್ಪಿದ ದೋಣಿ- ರಾಹುಲ್ ಗಾಂಧಿ

Public TV
1 Min Read

ನವದೆಹಲಿ: ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಮುದ್ರದ ಮಧ್ಯೆ ಬಿರುಗಾಳಿಯಲ್ಲಿ ಸಿಲುಕಿ ದಾರಿತಪ್ಪಿದ ದೋಣಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯ ಮಾಡಿದ್ದಾರೆ.

ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರಸರ್ಕಾರದವರು ನಮ್ಮ ಎಲ್ಲಾ ಸಲಹೆಗಳನ್ನು ಪಕ್ಕಕ್ಕಿಟ್ಟರು. ಈಗ ಪರಿಸ್ಥಿತಿ ಸಮುದ್ರದ ನಡುವೆ ಬಿರುಗಾಳಿಗೆ ಸಿಲುಕಿದ ದೋಣಿಯಂತಾಗಿದೆ. ಯಾವ ದಿಕ್ಕಿಗೆ ಹೋಗಬೇಕೆಂದು ತಿಳಿಯುತ್ತಿಲ್ಲ ಎಂದು ಹೇಳುವ ಮೂಲಕವಾಗಿ ಬಿಜೆಪಿ ಕುರಿತಾಗಿ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ಪದೇ ಪದೇ ನಾವೇ ಗೆದ್ದೆವು ಎಂದು ಬೀಗುತ್ತದೆ. ನಾವು ಎಲ್ಲವನ್ನು ಮಾಡಿದ್ದೇವೆ ಎಂದು ಹೇಳುತ್ತಾರೆ. ಸರ್ಕಾರ ನಡೆಯೇ ಈ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.

ಕೊರೊನಾ, ಜಾಗೃತಿ, ಸರ್ಕಾರದ ನಿಲುವು, ಮತ್ತು ವೈರಸ್ ಸಂಬಂಧಿತ ಅನೇಕ ಸಮಸ್ಯೆಗಳಿಂದ ಪರಿಹಾರ ಪಡೆಯಲು ವ್ಯಾಕ್ಸಿನ್, ತಂತ್ರಗಾರಿಕೆ ಮತ್ತು ಆದಾಯದ ಬೆಂಬಲ ಬೇಕಿದೆ ಎಂದು ರಾಹುಲ್ ಗಾಂಧೀ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *