ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಮಗಳ ಐಶ್ವರ್ಯವೇ ಮುಳುವಾಗುತ್ತಾ..?

Public TV
2 Min Read

– 78 ಕೋಟಿ ಹಣ ಸುರಿದಿದ್ದ ಕನಕಪುರ ಬಂಡೆ

ಬೆಂಗಳೂರು: ಮಗಳು ಐಶ್ವರ್ಯಾ ತನ್ನ ಕಾಲಿನ ಮೇಲೆ ನಿಲ್ಲುವಂತೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೋಟಿಗಟ್ಟಲೆ ಹಣವನ್ನು ಸುರಿದಿದ್ದರು. ಇದೀಗ ಅದೇ ಡಿಕೆಶಿಗೆ ಮುಳುವಾಯಿತಾ ಎಂಬ ಅನುಮಾನ ಮೂಡಿದೆ.

ಡಿಕೆ ಶಿವಕುಮಾರ್ ಸೋಲಾರ್ ಮತ್ತು ಸೇಲ್ ಪ್ರಾಜೆಕ್ಟ್ ಗೆ ಬರೋಬ್ಬರಿ 78 ಕೋಟಿ ಹಣ ಸುರಿದಿದ್ದರು. ಆದರೆ ಈ ಹಣದ ಮೂಲದ ಬಗ್ಗೆ ಡಿ.ಕೆ ಶಿವಕುಮಾರ್ ಯಾವುದೇ ಉತ್ತರ ನೀಡಿರಲಿಲ್ಲ.

ಸೋಲಾರ್ ಮತ್ತು ಸೇಲ್ಸ್ ಪ್ರಾಜೆಕ್ಟ್ ಗೆ ಬರೋಬ್ಬರಿ 78 ಕೋಟಿ ವ್ಯವಹಾರ ನಡೆದಿತ್ತು. ಇದನ್ನು ಪ್ರಶ್ನಿಸಿದರೆ ನನ್ನ ಹಿತೈಷಿಗಳು, ಕುಟುಂಬದವರು ಹಾಗೂ ಸ್ನೇಹಿತರು ಕೊಟ್ಟ ಹಣ ಎಂದಿದ್ದರು. ಇದು ಕೂಡ ಮನಿ ಲ್ಯಾಂಡರಿಂಗ್ ನಿಂದಲೇ ಬಂದಿದ್ದು ಅನ್ನೋ ಅನುಮಾನ ಇಡಿಗೆ ಇದೆ. ಇದನ್ನೇ ಮೂಲವಾಗಿಟ್ಟುಕೊಂಡು ಸಿಬಿಐ ದಾಳಿ ಮಾಡಿದೆ ಎನ್ನಲಾಗಿದೆ. ಹೀಗಾಗಿ ಡಿ.ಕೆ ಶಿವಕುಮಾರ್ ತನ್ನ ಮಗಳು ಐಶ್ವರ್ಯಗಾಗಿ ಮಾಡಿದ್ದ ಆಸ್ತಿಯೇ ಮುಳುವಾಯಿತಾ ಎಂಬ ಪ್ರಶ್ನೆ ಮೂಡಿದೆ.

ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಬಳಿಕ ಸಿಬಿಐನಿಂದ ತನಿಖೆ ಆರಂಭವಾಗಿದೆ. ಇದೀಗ ಡಿಕೆಶಿಯ ಸೋಲಾರ್ ಪ್ಲಾಂಟ್ ಮೇಲೆ ಸಿಬಿಐ ಕಣ್ಣಾಕಿದೆ. ಸೋಲಾರ್ ಪ್ಲಾಂಟ್ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಗದ್ದಿನಕೇರಿಯಲ್ಲಿದ್ದು, 1,950 ಎಕರೆಯಲ್ಲಿ ನಿರ್ಮಾಣವಾಗಿರುವ ದೇಶದ ಅತಿ ದೊಡ್ಡ ಪ್ಲಾಂಟ್ ಆಗಿದೆ. ಈ ಬಗ್ಗೆ ದಾಖಲೆಗಳನ್ನು ಪಡೆದು ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಈಗ ಸಿಬಿಐ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ.

ಆಗ ಡಿಕೆ ಶಿವಕುಮಾರ್ ಸೋಲಾರ್ ಪವರ್ ಪ್ಲಾಂಟ್‍ನ ಗುತ್ತಿಗೆ ನೀಡಲು ಬರೋಬ್ಬರಿ 350 ಕೋಟಿ ಕಿಕ್ ಬ್ಯಾಗ್ ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಡಿ.ಕೆ ಶಿವಕುಮಾರ್ ಜೊತೆಗೆ ಡಿ.ಕೆ.ಸುರೇಶ್, ತಾಯಿ, ಪುತ್ರಿ, ಪತ್ನಿ, ಡೈವರ್, ಉದ್ಯಮಿ ಸಚಿನ್ ನಾರಾಯಣ್, ದೆಹಲಿಯ ಆಪ್ತ ಸಹಾಯಕ ಆಂಜನೇಯ, ಲಕ್ಷ್ಮಿ ಹೆಬ್ಬಾಳಕರ್, ಮಾಜಿ ಶಾಸಕ ರಾಜಣ್ಣ, ಆಪ್ತ ವಿಜಯ್ ಮುರಗುಂದ್, ಮತ್ತೊರ್ವ ಆಪ್ತ ಶರ್ಮಾರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈಗ ಸಿಬಿಐನಿಂದ ಆಂಜನೇಯ, ವಿಜಯ್ ಮುರಗುಂದ್  ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರಣೆ ಮಾಡುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *