ಕೃಷ್ಣ ಜನಾರ್ದನ ಯದುನಂದನ ಕೃಷ್ಣ.. ಶರಾಯು ಹಾಡು ರಿಲೀಸ್‌

Public TV
1 Min Read

ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಹಲವೆಡೆ ಮಕ್ಕಳು ಕೃಷ್ಣನ ವೇಷ ಧರಿಸಿದರೆ ಇನ್ನು ಕೆಲವರು ಹಾಡಿನ ಮೂಲಕ ಕೃಷ್ಣನನ್ನು ಸ್ತುತಿಸುತ್ತಾರೆ. ಅದೇ ರೀತಿಯಾಗಿ ಬೆಂಗಳೂರಿನ ಬಾಲಕಿಯೊಬ್ಬಳು ಕೃಷ್ಣನ ಹಾಡನ್ನು ಹಾಡಿದ್ದಾಳೆ.

4ನೇ ತರಗತಿ ಓದುತ್ತಿರುವ ಶರಾಯು ಯತೀಶ್‌ “ಕೃಷ್ಣ ಜನಾರ್ದನ ಯದುನಂದನ ಕೃಷ್ಣ ಮಧುಸೂದನ…” ರಿಮಿಕ್ಸ್‌ ಹಾಡನ್ನು ಹಾಡಿದ್ದಾಳೆ. ಒಟ್ಟು 4 ನಿಮಿಷ 37 ಸೆಕೆಂಡ್‌ ಇಡುವ ವಿಡಿಯೋ ಯೂ ಟ್ಯೂಬ್‌ನಲ್ಲಿ ಅಪ್ಲೋಡ್‌ ಆಗಿದೆ.

ಸಂಗೀತ ಮತ್ತು ಸಾಹಿತ್ಯವನ್ನು ಅನುಪಮಾ ನೀಡಿದ್ದರೆ ಸ್ಯಾಮ್ ಅವರು ಪ್ರೋಗ್ರಾಮಿಂಗ್ ಮಾಡಿದ್ದಾರೆ. ಫಣೀಂದ್ರ ರೆಡ್ಡಿ ಛಾಯಾಗ್ರಹಣ ಮಾಡಿದ್ದು, ಯತೀಶ್ ವೆಂಕಟೇಶ್‌ ಹಾಡಿನ ನಿರ್ಮಾಪಕರಾಗಿದ್ದಾರೆ. ಸಂಭ್ರಮ್ ಸ್ಟುಡಿಯೋದಲ್ಲಿ ರೆಕಾರ್ಡ್‌ ಮಾಡಲಾಗಿದ್ದು, ಹಾಡು ಸುಂದರವಾಗಿ ಮೂಡಿ ಬಂದಿದೆ. ಶರಾಯು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ಮೊಮ್ಮಗಳು.

Share This Article
Leave a Comment

Leave a Reply

Your email address will not be published. Required fields are marked *