ಕುಮದ್ವತಿ ನದಿಯ ತೀರದಲ್ಲಿ ಬಾವಲಿಗಳ ಹತ್ಯೆ- ಐವರು ಆರೋಪಿಗಳ ಬಂಧನ

Public TV
1 Min Read

ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕು ಮಾಸೂರು ಗ್ರಾಮದ ಬಳಿ ಇರುವ ಕುಮದ್ವತಿ ನದಿಯ ತೀರದಲ್ಲಿ 85 ಬಾವಲಿಗಳ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಮಾಸೂರು ಗ್ರಾಮದ ಕುಮದ್ವತಿ ನದಿ ದಂಡೆಯ ಮೇಲೆ ನೀಲಗಿರಿ ಮರಗಳ ಮೇಲೆ ವಾಸವಿದ್ದ 85 ಬಾವಲಿಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತೀರುಗುವ ವೇಳೆ 5 ಅರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಕಾರಿನೊಳಗೆ ಪ್ರೇಮಿಗಳು ಆತ್ಮಹತ್ಯೆ

ಬಂಧಿತ ಆರೋಪಿಗಳಾದ ಬೆಂಗಳೂರು ಮೂಲದ ಮಂಜುನಾಥ್(45), ತುಮಕೂರು ಜಿಲ್ಲೆಯ ಅಗ್ನಿಬನ್ನಿರಾಯನಗರದ ಕೃಷ್ಣಪ್ಪ ಉರ್ಫ್(60), ರಾಮಕೃಷ್ಣಯ್ಯ(52), ಲಕ್ಷ್ಮಯ್ಯ ಹಾಗೂ ಲೋಕೇಶ್ ನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರಿಂದ ಹತ್ಯೆಗೈದ 85 ಬಾವಲಿ ಹಾಗೂ ಬಾವಲಿಗೆ ಬೇಟೆಗೆ ಬಳಸಿರುವ ಆಯುಧಗಳು ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಐವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9 ಮತ್ತು 51 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *