ಕುತ್ತಿಗೆಯಲ್ಲಿ ನಿಜವಾದ ಹಾವು, ಅಮರ ಹಳೆ ನೆನಪು: ಜಗ್ಗೇಶ್

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರ ಅಭಿನಯದ ಸಿನಿಮಾದ ಒಂದು ಸೀನ್ ನಾಗರಪಂಚಮಿಯ ದಿನ ಇಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕುರಿತಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೇಡ ಕೃಷ್ಣ ರಂಗಿನಾಟ 1994ರಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾವನ್ನು ರಾಜ್ ಕಿಶೋರ್ ನಿರ್ದೇಶನ ಮಾಡಿದ್ದರು. ಜಗ್ಗೇಶ್‍ಗೆ ಜೋಡಿಯಾಗಿ ಪಾಯಲ್ ಮಲ್ಹೋತ್ರ ಮತ್ತು ಸಿಂಧುಜಾ ನಟಿಸಿದ್ದರು. ಈ ಸಿನಿಮಾದಲ್ಲಿ ಜಗ್ಗೇಶ್ ಕತ್ತಿಗೆ ಹಾವನ್ನು ಸುತ್ತಿಕೊಂಡಿರುವ ದೃಶ್ಯ ಬರುತ್ತದೆ. ಈ ವೇಳೆ ಜಗ್ಗೇಶ್ ಕತ್ತಿನಲ್ಲಿ ನಿಜವಾದ ಹಾವೇ ಇದ್ದಿತ್ತಂತೆ ಈ ಕುರಿತಾಗಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಈ ದೃಶ್ಯದ ಶೂಟಿಂಗ್ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ. ಅದ್ಭುತ ದೃಶ್ಯ. ಆದರೆ ಅಂದು ಹೃದಯ ಬಾಯಿಗೆ ಬಂದಿತ್ತು. ಕಾರಣ ಆ ಹಾವು ಹಿಡಿದು ಮೂರು ದಿನ ಆಗಿತ್ತು ಅಷ್ಟೇ. ಅಲ್ಲಿ ಆಡಿರುವುದು ಸಂಭಾಷಣೆ ಅಲ್ಲ, ಭಯಕ್ಕೆ ನಿರ್ದೇಶಕನ ಬೈದದ್ದು. ನಂತರ ಡಬ್ಬಿಂಗ್‍ನಲ್ಲಿ ಈ ಸಂಭಾಷಣೆ ಹೇಳಿದ್ದು. ಪಾಪ ಈ ಚಿತ್ರದ ನಿರ್ದೇಶಕ ನಮ್ಮ ಗುರುಗಳು ರಾಜಕಿಶೋರ್. ಸತ್ತು 17 ವರ್ಷ ಆಯಿತು. ಅಮರ ಹಳೆ ನೆನಪು ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್. ಅಭಿಮಾನಿಗಳು ಕೇಳುವ ಪ್ರತಿ ಪ್ರಶ್ನೆಗೂ ಅವರ ಕಡೆಯಿಂದ ಉತ್ತರ ಸಿಗುತ್ತದೆ. ಅಭಿಮಾನಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರೋಕೆ ಅವರು ಟ್ವಿಟರ್ ಅನ್ನು ಹೆಚ್ಚು ಬಳಕೆ ಮಾಡುತ್ತಾರೆ. ಇಂದು ನಾಗರ ಪಂಚಮಿ. ಈ ಹಬ್ಬದಂದು ಅಭಿಮಾನಿಯೋರ್ವ ಜಗ್ಗೇಶ್ ನಟನೆಯ ಬೇಡ ಕೃಷ್ಣ ರಂಗಿನಾಟ ಚಿತ್ರದ ದೃಶ್ಯ ಹಂಚಿಕೊಂಡಿದ್ದರು. ಅದರ ಶೂಟಿಂಗ್ ನೆನಪನ್ನು ಜಗ್ಗೇಶ್ ಬಿಚ್ಚಿಟ್ಟಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *