ಕಾರಾಗೃಹದಲ್ಲಿ ಖೈದಿಗಳೊಂದಿಗೆ ಯುಗಾದಿ ಆಚರಣೆ

Public TV
1 Min Read

ಶಿವಮೊಗ್ಗ: ಇಂದು ನಾಡಿನಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ನಗರದಲ್ಲಿ ಸಹ ನರೇಂದ್ರ ಮೋದಿ ವಿಚಾರ ಮಂಚ್ ಕಾರ್ಯಕರ್ತರು ಕಾರಾಗೃಹಕ್ಕೆ ತೆರಳಿ ಬಂಧಿಗಳ ಜೊತೆ ಯುಗಾದಿ ಹಬ್ಬ ಆಚರಿಸಿದರು.

ವಿವಿಧ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿರುವ ಬಂಧಿಗಳಿಗೆ ಬೇವು, ಬೆಲ್ಲ ನೀಡಿ ಶುಭಾಶಯ ಕೋರಿದರು. ಕಾರಾಗೃಹದಲ್ಲಿ ಶಿಕ್ಷೆಗೆ ಒಳಗಾಗಿದ್ದೇವೆ, ನಮಗೆ ಹಬ್ಬದ ಸಂಭ್ರಮ ಇಲ್ಲ ಎಂಬ ಮನೋಭಾವ ಹೋಗಲಾಡಿಸುವ ಸಲುವಾಗಿ ಕಾರಾಗೃಹದ ಸಜಾ ಬಂಧಿಗಳ ಜೊತೆ ಯುಗಾದಿ ಆಚರಿಸಿದರು.

ಬಂಧಿಗಳು ಸಹ ಯುಗಾದಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಿ, ಕಳೆದ ಹಲವು ವರ್ಷಗಳಿಂದ ಕಾರಾಗೃಹದಲ್ಲೇ ಹಬ್ಬ ಆಚರಿಸುತ್ತಿದ್ದೇವೆ. ನಮ್ಮವರ ಜೊತೆ ಹಬ್ಬ ಆಚರಿಸುತ್ತಿಲ್ಲ ಎಂಬ ನೋವು ಇಲ್ಲ. ಇಲ್ಲಿರುವವರೆಲ್ಲಾ ನಮ್ಮ ಸಹೋದರರೆ ಇವರ ಜೊತೆಯಲ್ಲಿಯೇ ಖುಷಿಯಾಗಿ ಹಬ್ಬ ಆಚರಿಸುತ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *