ಕಾಡುಪ್ರಾಣಿಗೆ ಇಟ್ಟಿದ್ದ ಕೈಬಾಂಬ್ ಸ್ಫೋಟ – ಗೋವಿನ ಬಾಯಿ ಛಿದ್ರ

Public TV
0 Min Read

ಕಾರವಾರ: ಕಾಡುಪ್ರಾಣಿಯ ಬೇಟೆಗಾಗಿ ಇಟ್ಟಿದ್ದ ಕೈಬಾಂಬ್ ಸ್ಫೋಟಗೊಂಡು ಆಕಳಿನ ಬಾಯಿ ಛಿದ್ರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದ ಬಳಿ ನಡೆದಿದೆ.

ಮುಂಡಗೋಡಸ ಸನವಳ್ಳಿ ಪ್ಲಾಟಿನ ಅಪ್ಪು ನಾರಾಯಣಸ್ವಾಮಿ ನಾಯರ್ ಎಂಬವರಿಗೆ ಸೇರಿದ ಆಕಳು ಇದಾಗಿದೆ. ಮೇವು ಅರಸಿ ಜಲಾಶಯದ ಬಳಿ ಬಂದಿದ್ದು ಈ ವೇಳೆ ಆಹಾರವೆಂದು ನೆಲದಲ್ಲಿ ಕಾಡುಪ್ರಾಣಿ ಬೇಟೆಗೆ ಇರಿಸಿದ್ದ ಕೈಬಾಂಬ್ ತಿನ್ನಲು ಪ್ರಯತ್ನಿಸಿದಾಗ ಅದು ಸ್ಫೋಟಗೊಂಡಿದೆ.

ಸ್ಫೋಟದಿಂದಾಗಿ ಆಕಳಿನ ಬಾಯಿ ಸಂಪೂರ್ಣ ಛಿದ್ರವಾಗಿದ್ದು, ಅರಣ್ಯಾಧಿಕಾರಿಗಳ ಪರಿಶೀಲನೆ ವೇಳೆ ಮತ್ತೊಂದು ಜೀವಂತ ಕೈಬಾಂಬ್ ದೊರೆತಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *