ಕಳ್ಳ ಮಂಜು ತುಂಟಾಟ

Public TV
1 Min Read

ನೆಯವರಿಗೆ ತಿಳಿಯದಂತೆ ಮಂಜು ಕಸದ ಬುಟ್ಟಿಯಲ್ಲಿ ಒಂದು ವಸ್ತುವನ್ನು ಅಡಗಿಸಿಟ್ಟಿದ್ದಾರೆ. ಈ ವಸ್ತು ಎಲ್ಲಿ ಅಂತಾ ಕೇಳಿದರೆ ಮನೆಯ ಸದಸ್ಯರ ಮೇಲೆ ಹಾಕುತ್ತೇನೆ ಎಂದು ಪ್ಲ್ಯಾನ್ ಕೂಡಾ ಮಾಡಿದ್ದಾರೆ.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಕತೆ ಮಂಜನಿಗೆ ಹೇಳೋರು ಯಾರು?

ಬಿಗ್‍ಮನೆಯಲ್ಲಿರು ಸದಸ್ಯರು ಒಂದೊಂದು ರೀತಿಯ ಮನೋಭಾವನೆಯನ್ನು ಹೊಂದಿದ್ದಾರೆ. ಒಬ್ಬೊಬ್ಬರು ಮುಖವಾಡ ಕಳಚಿ ಬೀಳುತ್ತಿದೆ. ಮಂಜು ಎಷ್ಟು ನಗುತ್ತಾ ಇರುತ್ತಾರೋ ಅಷ್ಟೇ ಕೋಪವು ಬರುತ್ತದೆ ಎಂಬುದನ್ನು ನಾವು ಕಳೆದ ಕೆಲವು ಟಾಸ್ಕ್‍ಗಳಲ್ಲಿ ನೋಡಿದ್ದೇವೆ. ಆದರೆ ಇದೀಗ ಒಂದು ಕಳ್ಳ ಕೆಲಸವನ್ನು ಮಾಡಿ ಬಿಗ್‍ಬಾಸ್ ಕ್ಯಾಮೆರಾಕ್ಕೆ ಸಿಕ್ಕಿ ಬಿದ್ದಿದ್ದಾರೆ.

ಮಂಜು ಪಾವಗಡ..ಕಳ್ಳ ಮಂಜಾ ಆಗಿದ್ಯಾಕೆ?

ದಿವ್ಯಾ ಸುರೇಶ್ ಹಾಗೂ ಮಂಜುಪಾವಗಡ ಮಾತನಾಡುತ್ತಾ ಕುಳಿತಿದ್ದರು. ಮಂಜು ಕಾಫಿ ಕಪ್ ಇಡಲು ಹೋಗಿ ಕೆಳಗೆ ಬೀಳಿಸಿದ್ದಾರೆ. ಕಪ್ ಒಡೆದು ಮೂರು ಪೀಸ್ ಆಗಿದೆ. ಈ ವೇಳೆ ಮಂಜು ಆತುರಾತುರವಾಗಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಸಾರಿ ಬಿಗ್ ಬಾಸ್ ಸಾರಿ ಎನ್ನುತ್ತಾ ಕಪ್ ಮುಚ್ಚಿಡುವ ಪ್ರಯತ್ನವನ್ನು ಮಾಡಿದ್ದಾರೆ.

ದಯವಿಟ್ಟು ನನ್ನ ಕ್ಷಮಿಸಿ ಬಿಗ್‍ಬಾಸ್ ನಾನು ಬೇಕಂತಾ ಒಡೆದಿಲ್ಲ ಮಿಸ್ ಆಗಿ ಬಿದ್ದು ಹೋಗಿದೆ. ಈ ವಿಚಾರ ಯಾರಿಗೂ ಗೊತ್ತಾಗದ ಹಾಗೇ ನಾನು ಬಚ್ಚಿಡುತ್ತೇನೆ. ಮನೆಯ ಸದಸ್ಯರ ಬಳಿ ನನ್ನ ಕಪ್ ಎಲ್ಲಿ ಎಂದು ಅವಾಜ್ ಹಾಕುತ್ತೇನೆ. ಕ್ಷಮಿಸಿ ಬಿಗ್‍ಬಾಸ್ ಎನ್ನುತ್ತಾ ಒಡೆದ ಕಪ್ ಮುಚ್ಚಿಟ್ಟುಕೊಂಡು ಹೋಗಿ ಬಾತ್ ರೂಂ ನಲ್ಲಿರುವ ಕಸದ ಬುಟ್ಟಿಗೆ ಹಾಕಿದ್ದಾರೆ.

ಈ ಎಲ್ಲಾ ದೃಶ್ಯವನ್ನು ಬಿಗ್‍ಬಾಸ್ ಕ್ಯಾಮೆರಾ ನೋಡುತ್ತಿದ್ದಾಗ ನೀವು ನೋಡಿದ್ರಾ ಬಿಗ್‍ಬಾಸ್ ಎನ್ನುತ್ತಾ ಕಳ್ಳನಂತೆ ಮಾಡಿದ್ದಾರೆ. ಜೊತೆಯಲ್ಲಿಯೇ ಇದ್ದ ದಿವ್ಯಾ ಸುರೇಶ್, ಮಂಜುನ ಪರಿಸ್ಥಿತಿಯನ್ನು ಕಂಡು ನಕ್ಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *