ಕಳೆದ ಬಾರಿಗಿಂತ ಈ ವರ್ಷ 10 ಅಡಿ ಕುಸಿತ ಕಂಡ ಕೆಆರ್‍ಎಸ್ ನೀರಿನ ಮಟ್ಟ

Public TV
1 Min Read

ಮಂಡ್ಯ: ಹಳೆ ಮೈಸೂರು ಭಾಗಕ್ಕೆ ಕಳೆದ 15 ದಿನಗಳ ಹಿಂದೆಯೇ ಮುಂಗಾರು ಪ್ರವೇಶ ಮಾಡಿದೆ. ಆದ್ರೆ ನಿರೀಕ್ಷಿತ ಮಟ್ಟಕ್ಕೆ ಮಳೆ ಆಗದ ಕಾರಣಕ್ಕೆ ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕಿಂತ 10 ಅಡಿ ಕುಸಿತ ಕಂಡಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಜಲಾಶಯ ಹಳೆ ಮೈಸೂರು ಭಾಗದ ಜೀವನಾಡಿಯಾಗಿದೆ. ಸದ್ಯ ಕೆಆರ್‍ಎಸ್ ಜಲಾಶಯ ಕಳೆದ ವರ್ಷಕ್ಕಿಂತ ಈ ವರ್ಷ 10 ಅಡಿಯಷ್ಟು ನೀರಿನ ಮಟ್ಟ ಕಡಿಮೆಯಾಗಿದೆ. ಕೊಡಗು, ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಮುಂಗಾರು ಪ್ರವೇಶ ಮಾಡಿ 15 ದಿನಗಳು ಆದರೂ ಸಹ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಹೀಗಾಗಿ ಕೆಆರ್‍ಎಸ್ ಜಲಾಶಯ ಕಳೆದ ವರ್ಷಕ್ಕಿಂತ ಈ ಬಾರಿ 10 ಅಡಿಯಷ್ಟು ನೀರಿನ ಮಟ್ಟ ಕುಸಿತ ಕಂಡಿದೆ.

124.80 ಅಡಿ ಸಾಮಥ್ರ್ಯವಿರುವ ಕೆಆರ್‍ಎಸ್ ಜಲಾಶಯ ಸದ್ಯ 82.54 ಅಡಿಯಷ್ಟು ಇದ್ದು, ಇದೇ ವೇಳೆ ಕಳೆದ ವರ್ಷ 92 ಅಡಿಯಷ್ಟು ಭರ್ತಿಯಾಗಿತ್ತು. ಒಂದು ಮುಂದಿನ ದಿನಗಳಲ್ಲೂ ಸಹ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯಲಿಲ್ಲ ಎಂದರೆ ಕೆಆರ್‍ಎಸ್ ಅಣೆಕಟ್ಟೆಯಲ್ಲಿ ಮತ್ತಷ್ಟು ಅಡಿಗಳು ನೀರು ಕುಸಿತ ಕಾಣಲಿದೆ. ಇದರಿಂದ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಯ ಜನರಿಗೆ ತೊಂದರೆ ಉಂಟಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *