ಹಸಿರಿನ ಮಧ್ಯೆ ಜಿಪ್‍ಲೈನ್ – ಕಪ್ಪತ್ತಗುಡ್ಡದಲ್ಲಿ ರೋಮಾಂಚನಕಾರಿ ಅನುಭವ

Public TV
3 Min Read

– ಯುವಕರನ್ನು ಸೆಳೆಯುತ್ತಿದೆ ರಾಜ್ಯದ ಅತಿ ಉದ್ದದ ಜಿಪ್‍ಲೈನ್

ಗದಗ: ಲಾಕ್‍ಡೌನ್‍ನಲ್ಲಿ ಮನೆಯಲ್ಲೇ ಕೂತು ಬೇಜಾರಾಗಿದೆ, ಈಗ ಅನ್‍ಲಾಕ್ ಆಗಿದೆ, ಎಲ್ಲಾದ್ರೂ ಸುತ್ತಾಡಿಕೊಂಡು ಬರೋಣ. ಸ್ವಲ್ಪ ಅಡ್ವೆಂಚರಸ್ಸಾಗಿ ಏನಾದ್ರೂ ಮಾಡೋಣ ಎಂದು ನೀವು ಪ್ಲಾನ್ ಮಾಡಿದ್ದರೆ, ನೇರವಾಗಿ ಮುದ್ರಣಾ ಕಾಶಿಗೆ ಬನ್ನಿ. ಇಲ್ಲಿ ಒಂದೊಳ್ಳೆ ಅನುಭವ ಪಡೆಯಬಹುದು.

ನಗರದ ಹೊರವಲಯದ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನೂತನವಾಗಿ ಜಿಪ್‍ಲೈನ್ ಅಳವಡಿಸಲಾಗಿದೆ. ಒಂದು ತುದಿಯಿಂದ ಮತ್ತೊಂದು ತುದಿಗೆ ತಂತಿಯ ಸಹಾಯದಿಂದ ಸಾಗೋ ಈ ಕ್ರೀಡೆ ಸದ್ಯ ಯುವ ಜನರಲ್ಲಿ ಭಾರೀ ಜನಪ್ರಿಯವಾಗಿದೆ. ಕಳೆದ ವರ್ಷ ಲಾಕ್‍ಡೌನ್ ಸಂದರ್ಭದಲ್ಲೇ ಈ ಜಿಪ್‍ಲೈನ್ ಅಳವಡಿಸುವ ಕಾಮಗಾರಿ ಆರಂಭವಾಗಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡು ಪ್ರವಾಸಿಗರ ಹಾಟ್ ಫೆವರೆಟ್ ಆಗವಾಗಿದೆ.

ರಾಜ್ಯದಲ್ಲೇ ಅತ್ಯಂತ ಉದ್ದದ ಜಿಪ್‍ಲೈನ್ ಹೊಂದಿದ ಹಿರಿಮೆ ಗದಗನ ಸಾಲುಮರದ ತಿಮ್ಮಕ್ಕ ಉದ್ಯಾನವನದ್ದಾಗಿದೆ. ಕಪ್ಪತ್ತಗುಡ್ಡದ ಈ ಹಸಿರು ಸೊಬಗಿನ ನಡುವೆ ಈ ಬದಿಯಿಂದ ಈ ಬದಿಯವರೆಗೆ ಎತ್ತರಕ್ಕೆ ಜಿಪ್‍ಲೈನ್ ತಂತಿ ಮೂಲಕ ಹಾರೋದೆ ಒಂದು ರೋಮಾಂಚನ. ಸುಮಾರು 32 ಲಕ್ಷ ರೂ. ವೆಚ್ಚದಲ್ಲಿ ಈ ಜಿಪ್‍ಲೈನ್ ಕಾಮಗಾರಿ ಕೈಗೆತ್ತಿಗೊಳ್ಳಲಾಗಿತ್ತು. ಸುಮಾರು 360 ಮೀಟರ್ ಉದ್ದದ ತಂತಿ ಬಳಸಿ, ಲೈನ್ ಅಳವಡಿಸಲಾಗಿದೆ. ಮೈಸೂರು ಹಾಗೂ ಹೈದರಾಬಾದ್ ಫಿಲ್ಮ್ ಸಿಟಿಯಲ್ಲಿ ಜಿಪ್‍ಲೈನ್ ವ್ಯವಸ್ಥೆ ಇದೆ. ಅಷ್ಟು ದೂರ ಹೋಗೋದಕ್ಕೆ ಆಗದಿರುವವರು ಗದಗಿನಲ್ಲೆ ಈ ಅನುಭವ ಪಡೆಯಬಹುದು. ಸೇಫ್ಟಿ ಫಸ್ಟ್ ಅನ್ನೋ ಕಾರಣಕ್ಕೆ ಇಲ್ಲಿಯ ಸಿಬ್ಬಂದಿಗೂ ತರಬೇತಿ ನೀಡಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡೇ ಪ್ರತಿ ರೈಡ್ ನಡೆಸಲಾಗುತ್ತೆ. ಅನ್‍ಲಾಕ್ ಆದ ಮೇಲೆ ಸಾಕಷ್ಟು ಜನ ಪ್ರವಾಸಿಗರು ಬಂದು ಇದರ ಅನುಭವ ಪಡೆಯುತ್ತಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಪ್‍ಲೈನ್ ಆಡಲು ಒಬ್ಬರಿಗೆ 100 ರೂಪಾಯಿ ದರ ನಿಗದಿ ಮಾಡಲಾಗಿದೆ. ತಂತಿಯ ಮೇಲೆ ಸಾಗುವ ವೇಳೆ ಮೈ ಝುಮ್ಮೆನಿಸುತ್ತೆ. ಬಾನಾಡಿಯಂತೆ ಸ್ವಚ್ಛಂದವಾಗಿ ಹಾರಾಡ್ತಿರೋ ಹಾಗೆ ಅನುಭವ ಆಗುತ್ತೆ. ಹಸಿರು ಸೆರಗು ಹೊತ್ತ ಬೆಟ್ಟವನ್ನ ಮೇಲಿಂದ ಕಣ್ತುಂಬಿಕೊಳ್ಳುವ ಭಾಗ್ಯ ಸಿಗುತ್ತೆ. ಲಾಕ್‍ಡೌನ್ ನಿಂದ ಮನೆಯಲ್ಲೇ ಕೂತು ಬೇಜಾರಾಗಿದ್ದ ಬಹಳಷ್ಟು ಜನ, ಈಗ ಈ ವಿಶಿಷ್ಟ ಸಾಹಸ ಕ್ರೀಡೆಯಲ್ಲಿ ಭಾಗಿಯಾಗುವ ಮೂಲಕ ರಿಲ್ಯಾಕ್ಸ್ ಆಗ್ತಿದ್ದಾರೆ.

ಏನಿದು ಜಿಪ್ ಲೈನ್?
ತಂತಿಯ ಮೂಲಕ ಒಂದು ತುದಿಯಿಂದ ಇನ್ನೊಂದು ತುದಿಗೆ ಗುರುತ್ವಾಕರ್ಷಣೆಯ ಬಲದಿಂದ ತಲುಪುವುದಕ್ಕೆ ಜಿಪ್‍ಲೈನ್ ಎನ್ನುತ್ತಾರೆ. ಈಶಾನ್ಯ ಭಾರತದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ, ಗಣಿಗಾರಿಕೆಗಳಲ್ಲಿ ಸರಕುಗಳನ್ನ ಸಾಗಿಸಲು ಈ ಜಿಪ್‍ಲೈನ್ ಬಳಸುತ್ತಿದ್ದರು. ಈಗ ಇದು ಯುತ್ಸ್ ಮನ ಸೆಳೆಯುವ ಮನರಂಜನಾ ಕ್ರೀಡೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಅನ್‍ಲಾಕ್ ಆಗಿದ್ದೇ ತಡ ಜಿಪ್‍ಲೈನ್ ಆಡಲು ಪ್ರವಾಸಿಗರ ದಂಡು ಬಿಂಕದಕಟ್ಟಿಯ ಕಡೆ ಹರಿದು ಬರ್ತಿದೆ.

ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಈಗ ಹೊಸ ಕ್ರೀಡೆಯಾಗಿ ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರು ಏಂಜಾಯ್ ಮಾಡುವ ಎಲ್ಲಾ ವ್ಯವಸ್ಥೆಯನ್ನು ಈ ಪಾರ್ಕ್ ನಲ್ಲಿ ಕಲ್ಪಿಸಲಾಗಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರು ಅರಣ್ಯ ಸಚಿವರಾಗಿದ್ದಾಗ ಸುಮಾರು 32 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಜಿಪ್‍ಲೈನ್ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಸದ್ಯ ಪೂರ್ಣ ಗೊಂಡಿದ್ದು, ಲಾಕ್‍ಡೌನ್ ವೇಳೆಯಲ್ಲಿ ಆದಾಯವಿಲ್ಲದೆ ಸೊರಗಿದ್ದ ಉದ್ಯಾನವನಕ್ಕೆ ಈಗ ಅತೀ ಹೆಚ್ಚು ಆದಾಯ ತಂದುಕೊಡುತ್ತಿದೆ. ಸದ್ಯ ಇಲ್ಲಿನ ಸಿಬ್ಬಂದಿ ಸಂಬಳ ಸೇರಿದಂತೆ ಬಹಳಷ್ಟು ಖರ್ಚು ವೆಚ್ಚಗಳನ್ನ ನೀಗಿಸಲು ಅನುಕೂಲಕರವಾಗಿದೆ.

ಈ ಕ್ರೀಡೆಯಾಡಲು ಎಲ್ಲ ರೀತಿಯ ರಕ್ಷಣೆಯ ಸಲಕರಗಳನ್ನು ಹೊಂದಿಸಿದ್ದಾರೆ. ಕೊರೊನಾ ಸಂಪೂರ್ಣವಾಗಿ ಇನ್ನೂ ದೂರವಾಗಿಲ್ಲ. ದೂರ ಹೋಗೋದಕ್ಕೆ ಈಗ ಸಕಾಲವೂ ಅಲ್ಲ. ಸಮೀಪದಲ್ಲೇ ಒಂದು ಸಣ್ಣ ಟ್ರಿಪ್ ಮಾಡ್ಕೊಂಡು, ಎಂಜಾಯ್ ಮಾಡಬೇಕೆಂದು ನೀವು ಪ್ಲಾನ್ ಮಾಡಿದ್ರೆ, ಗದಗಿನ ಸಾಲುಮರದ ತಿಮ್ಮಕ್ಕ ಪಾರ್ಕ್‍ಗೆ ಬನ್ನಿ. ಫ್ಯಾಮಿಲಿ ಜೊತೆ ಸಖತ್ ಎಂಜಾಯ್ ಮಾಡಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *