ಕಪಾಳಕ್ಕೆ ಹೊಡೆದಿದ್ದ ಅಣ್ಣನನ್ನ ಕೊಂದಿದ್ದ ತಮ್ಮ ಅರೆಸ್ಟ್

Public TV
1 Min Read

– ಕೊಲೆಯ ಬಳಿಕ ಎಸ್ಕೇಪ್ ಆಗಿದ್ದ ತಮ್ಮ

ಜೈಪುರ: ನವೆಂಬರ್ 13ರಂದು ನಡೆದಿದ್ದ ಕೊಲೆ ಪ್ರಕರಣವನ್ನ ಭೇದಿಸುವಲ್ಲಿ ಜೈಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು ಮೃತ ವ್ಯಕ್ತಿಯ ತಮ್ಮನನ್ನೇ ಬಂಧಿಸಿ ಜೈಲಿಗಟ್ಟಿದ್ದಾರೆ.

ಮಧ್ಯಪ್ರದೇಶ ಮೂಲದ 25 ವರ್ಷದ ರಾಮ್ ಬಿಹಾರಿ ಬಂಧಿತ ಆರೋಪಿ. ಹಸನಾಪುರದ ಬಾಡಿಗೆ ಮನೆಯಲ್ಲಿ ಕುಟುಂಬದ ಜೊತೆ ರಾಮ್ ವಾಸವಾಗಿದ್ದನು. ಹಿರಿಯ ಸೋದರ ಸುದಾಮ್ ಜೊತೆ ಹಾಲಿನ ಡೈರಿ ನಡೆಸುತ್ತಿದ್ದನು. ಸುದಾಮ್ ಮದ್ಯವ್ಯಸನಿಯಾಗಿದ್ದು, ಕೆಲಸದ ವೇಳೆಯೂ ಕುಡಿದು ಬರುತ್ತಿದ್ದನು. ಡೈರಿಯಲ್ಲಿ ಮದ್ಯ ಸೇವಿಸಿ ಬರೋದು ಬೇಡ ಅಂತ ರಾಮ್ ಅಣ್ಣನಿಗೆ ಹಲವು ತಿಳಿ ಹೇಳಿದ್ದನು.

ನವೆಂಬರ್ 13ರ ಸಂಜೆ ಡೈರಿಯಲ್ಲಿ ಅಣ್ಣ-ತಮ್ಮ ಇದ್ದರು. ಈ ಸಮಯದಲ್ಲಿ ಇಬ್ಬರ ಮಧ್ಯೆ ಮತ್ತೆ ಕುಡಿತದ ವಿಷಯವಾಗಿ ಆರಂಭವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ರಾಮ್ ಕಪಾಳಕ್ಕೆ ಸುದಾಮ್ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ರಾಮ್ ಮದ್ಯ ಸೇವಿಸಿ ಡೈರಿಯಲ್ಲಿ ದ್ದ ಕಬ್ಬಿಣದ ಛಡಿಯಿಂದ ಅಣ್ಣನ ತಲೆಗೆ ಹೊಡೆದು ಮನೆಗೆ ಹೋಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುದಾಮ್ ಡೈರಿಯಲ್ಲಿಯೇ ಸಾವನ್ನಪ್ಪಿದ್ದಾನೆ.

ಕೊಲೆಯ ಬಳಿಕ ರಾಮ್ ನಾಪತ್ತೆಯಾಗಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರ ಆರೋಪಿಗಾಗಿ ಬಲೆ ಬೀಸಿದ್ದರು. ಇಂದು ಆರೋಪಿಯನ್ನ ಬಂಧಿಸಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *