ಒಂದೇ ದಿನದ ಅಂತರದಲ್ಲಿ ಮಾವ, ಅಳಿಯ ಸಾವು

Public TV
1 Min Read

ಚಾಮರಾಜನಗರ: ಅನಾರೋಗ್ಯ ಸಮಸ್ಯೆಯಿಂದ ಮಾವ,ಅಳಿಯ ಇಬ್ಬರು ಸಾವನ್ನಪ್ಪಿದ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ. ಇದನ್ನೂ ಓದಿ:  ಹೊಸತನದೊಂದಿಗೆ ಬಿಗ್‍ಬಾಸ್ ಪುನಾರಂಭಕ್ಕೆ ಕಿಚ್ಚನೂ ರೆಡಿ

ಸ್ವಾಮಿ, ಅಳಿಯ ರಾಜಶೇಖರ್ ಕಾಂತ್ ಮೃತರಾಗಿದ್ದಾರೆ. ಇವರು ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ನಿವಾಸಿಗಳಾಗಿದ್ದರು. ಈ ಮಾವ, ಅಳಿಯ ಒಂದು ದಿನದ ಅಂತರದಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 50 ದಿನ ನಡೆಯಲಿದೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್

ಸ್ವಾಮಿ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಇದೀಗ ಬೆಳಗ್ಗೆ ಮೃತ ಸ್ವಾಮಿಯ ತಂಗಿ ಮಗ ರಾಜಶೇಖರ್ ಕಾಂತ್ ಕೂಡ ಅನಾರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಕುಟುಂಬದ ಮೂಲದ ಪ್ರಕಾರ ಇಬ್ಬರು ಕೂಡ ಪರಸ್ಪರ ಬಿಟ್ಟು ಇರುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಮಾವ ಸಾವನ್ನಪ್ಪಿದ ಬೆಳಗ್ಗೆ ಅಳಿಯನೂ ಕೂಡ ಸಾವನ್ನಪ್ಪಿದ್ದಾನೆ. ಇಡೀ ಕುಟುಂಬವೀಗ ಶೋಕ ಸಾಗರದಲ್ಲಿ ಮುಳುಗಿದೆ.

Share This Article
Leave a Comment

Leave a Reply

Your email address will not be published. Required fields are marked *