ಎಲ್ಲೆಲ್ಲಿ ತಡೆಯಲಾಗಿದೆಯೋ ಅಲ್ಲೇ ರಸ್ತೆಗಿಳಿದು ಪ್ರತಿಭಟಿಸಿ – ಡಿಕೆಶಿ ಕರೆ

Public TV
1 Min Read

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರ ಜೊತೆ ಇಂದು ಕಾಂಗ್ರೆಸ್ ಬೀದಿಗಿಳಿದಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪೊಲೀಸರು ತಡೆದರೆ ನೀವು ಅಲ್ಲಿಯೇ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.

ಈ ಸಂಬಂಧ ವೀಡಿಯೋ ಬಿಡುಗಡೆ ಮಾಡಿರುವ ಡಿಕೆಶಿ, ಪ್ರತಿಭಟನೆಗೆ ಬೆಂಗಳೂರಿಗೆ ಬರುತ್ತಿರುವ ರೈತರನ್ನ ಬೆಂಗಳೂರು ಹೊರ ವಲಯದಲ್ಲಿ ತಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇದೇ ವೇಳೆ ಎಲ್ಲೆಲ್ಲಿ ತಡೆಯಲಾಗಿದೆಯೋ ಅಲ್ಲೇ ರಸ್ತೆಗಿಳಿದು ಪ್ರತಿಭಟಿಸುವ ಮೂಲಕ ರೈತರಿಗೆ ಬೆಂಬಲ ಸೂಚಿಸುವಂತೆ ಡಿಕೆಶಿ ಕರೆ ನೀಡಿದರು.

ಪೊಲೀಸರು ಬೆಂಗಳೂರಿಗೆ ಬರಲು ಬಿಡುತ್ತಿಲ್ಲ. ವಾಹನಗಳನ್ನು ತಡೆಯುತ್ತಿದ್ದಾರೆ ಎಂದು ಸಾಕಷ್ಟು ಬೆಂಬಲಿಗರು ಹಾಗೂ ರೈತರು ನನಗೆ ಕರೆ ಮಾಡುತ್ತಿದ್ದಾರೆ. ಅಂತವಹವರು ಇದ್ದಲ್ಲಿಂದಲೇ ಹೆದ್ದಾರಿ ಹಾಗೂ ರಸ್ತೆಗಳನ್ನು ತಡೆಹಿಡಿದು ರೈತರ ಪರ ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರವು ಪ್ರತಿಭಟನೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳದಂತೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತದೆ ಎಂಬುದು ನಮಗೆ ಗೊತ್ತಿದೆ. ಸಾಧ್ಯವಾದಷ್ಟು ಜನರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಬಂದು ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *