ಎನ್‌ಕೌಂಟರ್‌ ಭಯ – ಕೈ ಎತ್ತಿ ಶರಣಾದ ಉಗ್ರ, ಸೈನಿಕರ ಕಾಲಿಗೆ ಅಡ್ಡ ಬಿದ್ದ ತಂದೆ

Public TV
1 Min Read

ಶ್ರೀನಗರ: ಎನ್‌ಕೌಂಟರ್‌ ಕಾರ್ಯಾಚರಣೆಯ ವೇಳೆ ಯುವ ಉಗ್ರನೊಬ್ಬ ಭಾರತೀಯ ಸೇನೆಗೆ ಶರಣಾಗಿದ್ದಾನೆ.

ಉಗ್ರರು ಇರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬುದ್ಗಾಂನಲ್ಲಿ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಯಕ್ಕೆ ಬಿದ್ದ ಉಗ್ರನೊಬ್ಬ ಸೇನೆಗೆ ಶರಣಾಗಿದ್ದಾನೆ.

ಪ್ರದೇಶವನ್ನು ಸೇನೆ ಸುತ್ತವರಿದ ವೇಳೆ ಉಗ್ರ ನಾನು ಶರಣಾಗುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಸೈನಿಕರು, ನಿನ್ನನ್ನು ಏನು ಮಾಡುವುದಿಲ್ಲ. ಹತ್ತಿರ ಬರುವ ಮೊದಲು ಶರ್ಟ್‌ ತೆಗೆಯಬೇಕು ಎಂದು ಹೇಳಿದ್ದಾರೆ.

ಹತ್ತಿರ ಬಂದ ಬಳಿಕ ಆತನ ದೇಹದಲ್ಲಿ ಯಾವುದಾದರೂ ಶಸ್ತ್ರಾಸ್ತ್ರಗಳು ಇದೆಯೇ ಎಂದು ಪರಿಶೀಲಿಸಿದ್ದಾರೆ. ಬಳಿಕ ಇತನ ತಂದೆ ಸ್ಥಳಕ್ಕೆ ಬಂದು ಸೈನಿಕರ ಕಾಲಿಗೆ ಬಿದ್ದು ಕೃತಜ್ಞತೆ ಹೇಳಿದ್ದಾರೆ. ಬಳಿಕ ಮಗನಿಗೆ ಮತ್ತೆ ಉಗ್ರರ ಜೊತೆ ಕೈ ಜೋಡಿಸಬೇಡ ಎಂದು ಬುದ್ಧಿವಾದ ಹೇಳಿದ್ದಾರೆ.

ಈತ ಕೆಲ ದಿನಗಳ ಹಿಂದೆಯಷ್ಟೇ ಯುವಕ  ಉಗ್ರರ ಜೊತೆ ಸೇರಿದ್ದ. ಆತನ ಬಳಿಯಿಂದ ಎಕೆ 47 ರೈಫಲ್‌ ವಶಪಡಿಸಿಕೊಳ್ಳಲಾಗಿದೆ.

ಈ ವಿಚಾರದ ಬಗ್ಗೆ ಭಾರತೀಯ ಸೇನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಅಕ್ಟೋಬರ್‌ 13 ರಂದು ವಿಶೇಷ ಪೊಲೀಸ್‌ ಅಧಿಕಾರಿ 2 ಎಕೆ 47 ರೈಫಲ್‌ ಜೊತೆ ಪರಾರಿಯಾದ ಬಗ್ಗೆ ವರದಿ ಬಂತು. ಇದೇ ದಿನ ಚಡೂರದಿಂದ ಜಹಾಂಗೀರ್‌ ಬಟ್‌ ಎಂಬಾತ ನಾಪತ್ತೆಯಾಗಿದ್ದ. ಈತನ ಕುಟುಂಬ ಈತನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿತ್ತು. ಇಂದು ಬೆಳಗ್ಗೆ ನಡೆದ ಜಂಟಿ ಕಾರ್ಯಾಚರಣೆಯ ವೇಳೆ ಈತ ಪತ್ತೆಯಾಗಿ ಶರಣಾಗಿದ್ದಾನೆ” ಎಂದು ತಿಳಿಸಿದೆ.

https://twitter.com/PawanDurani/status/1317077178866040838

ಎನ್‌ಕೌಂಟರ್‌ ವೇಳೆ ಉಗ್ರರು ಸೇನೆಗೆ ಶರಣಾಗುವುದು ಅಪರೂಪದಲ್ಲಿ ಅಪರೂಪ. ಈ ಹಿಂದೆ ಅಗಸ್ಟ್‌ನಲ್ಲಿ ಶೋಪಿಯನ್‌ ಜಿಲ್ಲೆಯ ಕಿಲ್ಲೂರ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆಗೆ ಇಳಿದಾಗ ಒಬ್ಬ ಉಗ್ರ ಶರಣಾಗಿದ್ದ. ಈ ಕಾರ್ಯಾಚರಣೆಯಲ್ಲಿ 4 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *