ಎತ್ತಿನಗಾಡಿ, ಬೈಕಿನಲ್ಲಿ ಸಾಗಿಸುವ ಮರಳು ಸೀಜ್ ಮಾಡಲು ಬಿಡಲ್ಲ: ರೇಣುಕಾಚಾರ್ಯ

Public TV
1 Min Read

ದಾವಣಗೆರೆ: ಅಕ್ರಮ ಮರಳುಗಾರಿಕೆ ಮೇಲೆ ಪೋಲಿಸ್ ಇಲಾಖೆ ದಾಳಿ ಮಾಡಿದ್ದಕ್ಕೆ ಸಿಪಿಐ ಮೂಲಕ ಎಸ್ಪಿಗೆ ಅವಾಜ್ ಹಾಕಿದ್ದ ಶಾಸಕ ರೇಣುಕಾಚಾರ್ಯ ಇಂದು ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಮಾತನಾಡಿದ ಅವರು, ನಾನು ಬಡವರ ಪರ, ಎತ್ತಿನಗಾಡಿ, ಬೈಕ್ ನಲ್ಲಿ ಮರಳು ಸಾಗಿಸುವುದನ್ನು ಪೋಲಿಸರು ಮರಳು ಸೀಜ್ ಮಾಡಲು ಬಿಡುವುದಿಲ್ಲಾ ಎಂದಿದ್ದಾರೆ.

ಹೊನ್ನಾಳಿ ಸಿಪಿಐ ದೇವರಾಜ್ ಅವರಿಗೆ ಎತ್ತಿನಗಾಡಿನಲ್ಲಿ ಬೈಕ್ ನಲ್ಲಿ ಮರಳು ಸಾಗಿಸುವರಿಗೆ ತೊಂದರೆ ಕೊಡಬೇಡಿ, ಅಂತಹ ಮರಳುಸೀಜ್ ಮಾಡುವುದು ಬೇಡ ಎಂದು ಕಳೆದ ದಿನ ಹೇಳಿದ್ದೇನೆ. ಇನ್ನು ಎತ್ತಿನಗಾಡಿ, ಬೈಕ್ ನಲ್ಲಿ ಮರಳು ತೆಗೆದುಕೊಂಡು ಹೋಗಲು ಸರ್ಕಾರದ ಅನುಮತಿ ಇದೆ. ಅಕ್ರಮ ಗಣಿಗಾರಿಕೆ ಮರಳುಗಾರಿಕೆ ಮಾಡಿದರೆ ಸೀಜ್ ಮಾಡಲಿ, ನಾನು ಅದಕ್ಕೆ ಬೆಂಬಲ ಕೊಡುತ್ತೇನೆ. ಮಟ್ಕ, ಜೂಜಾಟ ಆಡುವವರನ್ನು ಸೀಜ್ ಮಾಡಿ. ಅಲ್ಲದೇ ಅಕ್ರಮ ಮರಳುಗಾರಿಕೆಗೆ ನಾನು ಕೂಡ ವಿರೋಧ ವ್ಯಕ್ತ ಪಡಿಸುತ್ತೇನೆ. ಇದನ್ನೂ ಓದಿ: ಮರಳು ದಂಧೆಗೆ ಅಂಕುಶ ಹಾಕಲು ಹೋದ ಎಸ್‍ಪಿಗೆ ರೇಣುಕಾಚಾರ್ಯ ಅವಾಜ್

ಆದರೆ ಅಕ್ರಮ ಮರಳು ದಂಧೆ ಬಗ್ಗೆ ನಾನು ಸಾಕಷ್ಟು ಹೋರಾಟ ಮಾಡಿ ಬಡವರಿಗೆ ಮರಳು ಸಿಗುವಂತೆ ಮಾಡಿದ್ದೇನೆ. ನಾನು ಹೋರಾಟ ಮಾಡಿದ್ದರಿಂದ ಸಾಕಷ್ಟು ಪ್ರಕರಣ ನನ್ನ ಮೇಲೆ ದಾಖಲಾಗಿವೆ. ಎತ್ತಿನಗಾಡಿಯಲ್ಲಿ ಮರಳನ್ನು ಆಶ್ರಯ ಮನೆ ಕಟ್ಟಲು ಸಂಗ್ರಹಿಸಿಕೊಂಡಿದ್ದಾರೆ, ಅಂತಹವರ ಮರಳನ್ನು ಸೀಜ್ ಮಾಡಲು ನಾನು ಬಿಡುವುದಿಲ್ಲ ಎಂದು ಮತ್ತೆ ಎಸ್ಪಿಗೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ:  ತಮ್ಮ ವಿರುದ್ಧದ ಆರೋಪಕ್ಕೆ ರೇಣುಕಾಚಾರ್ಯ ಸ್ಪಷ್ಟನೆ

Share This Article
Leave a Comment

Leave a Reply

Your email address will not be published. Required fields are marked *