ಉಪ್ಪಿ ಫೌಂಡೇಷನ್‍ಗೆ ದೇಣಿಗೆ ನೀಡಿದ ಬಾಲ ನಟ

Public TV
1 Min Read

ಬೆಂಗಳೂರು: ಉತ್ತಮ ಪ್ರಜಾಕೀಯ ಪಕ್ಷದ ನಾಯಕ ಮತ್ತು ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರರವರ ಉಪ್ಪಿ ಫೌಂಡೇಶನ್‍ಗೆ ಬಾಲ ನಟನೊಬ್ಬ 10,000ರೂ ದೇಣಿಗೆ ನೀಡಿದ್ದಾನೆ. ಈ ಬಗ್ಗೆ ನಟ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾದ ಸಂಕಷ್ಟದಲ್ಲಿರುವ ಜನರಿಗೆ ಹಲವಾರು ಸೆಲೆಬ್ರೆಟಿಗಳು ಸಹಾಯ ಮಾಡುತ್ತಿದ್ದಾರೆ. ಉಪೇಂದ್ರರವರು ಕೂಡ ಉಪ್ಪಿ ಫೌಂಡೇಷನ್ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದು, ಬಾಲ ನಟ ಅನೀಶ್ ಸಾಗರ್ 10 ಸಾವಿರ ರೂ. ಸಹಾಯ ಮಾಡಿದ್ದಾರೆ.

ಈ ಬಗ್ಗೆ ಉಪೇಂದ್ರರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಜೀವನಾನೆ ನಾಟಕ ಸ್ವಾಮಿ ಮತ್ತು ಸಾಲುಗಾರ ಎಂಬ ಶಾರ್ಟ್ ಮೂವಿಯಲ್ಲಿ ನಟಿಸಿದ್ದ ಮಾಸ್ಟರ್ ಅನೀಶ್ ಸಾಗರ್ ನಾಯ್ಡು ತನಗೆ ಬಂದ ಸಂಭಾವನೆಯಲ್ಲಿ 10,000ರೂ.ವನ್ನು ಕೊರೊನಾ ಸಂಕಷ್ಟದಲ್ಲಿರುವವರಿಗೆ ದಾನ ಮಾಡಿದ್ದಾನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *