ಈ ಭೂಮಿ ಆಕಾಶ ಇರುವವರೆಗೆ ಇದು ಸಾಧ್ಯವಿಲ್ಲ ಎಂದ ಮಂಜ

Public TV
2 Min Read

ದೊಡ್ಮನೆಯಲ್ಲಿ ಒಂದು ಕಡೆ ಟಾಸ್ಕ್ ಭರಾಟೆಯಾದರೆ. ಇನ್ನೊಂದು ಕಡೆ ಸ್ಪರ್ಧಿಗಳ ನಡುವೆ ಜಗಳ, ಮನಸ್ತಾಪ ಜೋರಾಗಿದೆ. ಈ ನಡುವೆ ಬೆಳಗ್ಗೆ ಎದ್ದು ಮಾತಿಗಿಳಿದ ಶುಭಾ ಪೂಂಜಾ ಅವರಿಗೆ ಮಂಜು ಈ ವಿಷಯ ಮಾತ್ರ ಈ ಭೂಮಿ ಆಕಾಶ ಇರುವವರೆಗೆ ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.

ಬಿಗ್ ಮನೆಯಲ್ಲಿ ಬೆಳಗ್ಗೆ ಎದ್ದು ಮಂಜು, ಶಮಂತ್, ದಿವ್ಯಾ ಉರುಡುಗ ಕಿಚನ್ ನಲ್ಲಿ ಅಡುಗೆ ತಯಾರಿಯಲ್ಲಿ ತೊಡಗಿಕೊಂಡಿದ್ದಾಗ ಬಂದ ಶುಭಾ ಮಾತಿಗಿಳಿದಿದ್ದಾರೆ ಬಳಿಕ ನಾನು ಸ್ನಾನಕ್ಕೆ ಹೋಗುತ್ತೇನೆ ಎಂದು ಹೊರಟಿದ್ದಾರೆ. ಈ ಸಂದರ್ಭ ದಿವ್ಯಾ ಮತ್ತು ಮಂಜು ದಯವಿಟ್ಟು ಹೋಗು ಮೊದಲಿಗೆ ಆ ಕೆಲಸ ಮಾಡು ಎಂದಿದ್ದಾರೆ. ಇದನ್ನು ಕೇಳಿಸಿಕೊಂಡ ಶುಭಾ ಆಯ್ತು ನಾನು ಈ ದಿನ ಪೂರ್ತಿ ನಿಮ್ಮಿಂದ ದೂರ ಇರುತ್ತೇನೆ. ನಿಮ್ಮ ಹತ್ತಿರ ಬರುವುದಿಲ್ಲ ನೀವೇ ಬೋರ್ ಆಯ್ತು ಬಾ ಎಂದು ಕರೆಯಬೇಕು ಎಂದರು.

ಈ ಮಾತನ್ನು ಕೇಳಿಸಿಕೊಂಡ ಮಂಜು ದಯವಿಟ್ಟು ಇದನ್ನು ಮಾಡು ಪ್ಲೀಸ್. ನೀನು ಜೀವನದಲ್ಲಿ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೀಯ. ನಿನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಬೇಡ ನೀನೊಬ್ಬಳು ಸ್ವಾಭಿಮಾನಿ ಎಂಬುದನ್ನು ತೋರಿಸಿಕೊಡು ಎಂದಿದ್ದಾರೆ. ಇದನ್ನೂ ಓದಿ : ಅಂದುಕೊಂಡಂತೆ ಮಾಡಿದ ದಿವ್ಯಾ – ಕ್ಯಾಪ್ಟನ್ ಆಗಿ ಹೊಸ ದಾಖಲೆ

ನೀನು ಮತ್ತು ದಿವ್ಯಾ ಇಬ್ಬರೂ ಕೂಡ ನಮಗೆ ಈ ರೀತಿ ಇರಲು ಸಾಧ್ಯವಿಲ್ಲ ದಯಾವಿಟ್ಟು ಮಾತನಾಡು ವಾಪಸ್ ಬಾ. ನಾವಿಬ್ಬರು ನಿನ್ನೊಂದಿಗೆ ಮಾತನಾಡದೆ ಇರಲಾಗದೆ ಸಾಯುತ್ತಿದ್ದೇವೆ. ನಮ್ಮ ಲೈಫ್‍ನಲ್ಲಿ ಈ ರೀತಿ ಇರಲು ಸಾಧ್ಯವಿಲ್ಲ ಎಂದು ನನ್ನ ಬಳಿ ಹೇಳಬೇಕು ಅಲ್ಲಿವರೆಗೆ ನಾನು ಬರಲ್ಲ ಈ ರೀತಿ ಮಾತನಾಡದೆ ಇರುತ್ತೇನೆ ಎಂದು ಶುಭಾ ಹೇಳಿದ್ದಾರೆ.

ಈ ಭೂಮಿ ಆಕಾಶ ಇರುವವರೆಗೆ ನೀನು ನಮ್ಮೊಂದಿಗೆ ಮಾತನಾಡದೆ ಇರಲು ಸಾಧ್ಯವಿಲ್ಲ. ನಿನ್ನಿಂದ ಮಾತನಾಡದೆ ಇರಲು ಖಂಡಿತ ಆಗುವುದಿಲ್ಲ ಎಂದು ಮತ್ತೆ ಮಂಜು ಶುಭಾ ಗೆ ಟಾಂಗ್ ನೀಡಿದ್ದಾರೆ. ಹಾಗೆ ದಿವ್ಯಾ ಕೂಡ ನೀನು ದಿನ ಪೂರ್ತಿ ಬಿಡು ತಿಂಡಿ ತಿನ್ನುವ ವರೆಗೆ ನಮ್ಮೊಂದಿಗೆ ಮಾತನಾಡದೆ ಇರು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *