ಈಶ್ವರಪ್ಪನವರೇ ಮುಸಲ್ಮಾನ್ ಮುಸಲ್ಮಾನ್ ಅಂತ ಸಾಯಬೇಡಿ: ಜಮೀರ್ ಅಹ್ಮದ್ ಕಿಡಿ

Public TV
3 Min Read

– ತೇಜಸ್ವಿ ಸೂರ್ಯ ಬರೀ ಮುಸಲ್ಮಾನರು ಕಾಣೋದಾ ನಿಮ್ಮ ಕಣ್ಣಿಗೆ?

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪನವರೇ ಮುಸಲ್ಮಾನ್, ಮುಸಲ್ಮಾನ್ ಅಂತ ಸಾಯಬೇಡಿ. ಸಂಸದ ತೇಜಸ್ವಿ ಸೂರ್ಯ ಅವರೇ ನಿಮ್ಮ ಕಣ್ಣಿಗೆ ಕೇವಲ ಮುಸಲ್ಮಾನರು ಕಾಣಿಸ್ತಾರಾ ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸಲ್ಮಾನರೇ ಕಾಣೋದಾ ನಿಮ್ಮ ಕಣ್ಣಿಗೆ?:
ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದ 17 ಮುಸ್ಲಿಂ ಯುವಕರನ್ನ ಜೊತೆಗೆ ಕರೆದುಕೊಂಡು ಶಾಸಕ ಜಮೀರ್ ಅಹ್ಮದ್ ಸುದ್ದಿಗೋಷ್ಠಿ ನಡೆಸಿದರು. ಮಾನ್ಯ ಗ್ರೇಟ್ ಎಂಪಿಯವರು ಒಳ್ಳೆ ಕೆಲಸ ಮಾಡಿದ್ದೀರಿ. ಕಾಂಗ್ರೆಸ್ ಸರ್ಕಾರ ಇದೆ ಅದರ ವಿರುದ್ಧ ಆರೋಪ ಮಾಡಿದ್ದೀನಿ ಅನ್ನೋ ರೀತಿ ನಿಮ್ಮದೇ ಸರ್ಕಾರದ ವಿರುದ್ಧ ಕೆಲಸ ಮಾಡಿದ್ದೀರಿ. ನಿಮ್ಮ ಸಿಎಂ, ಬಿಜೆಪಿ ಸರ್ಕಾರ ಇರೋದು ಯಾಕೆ ರಾಜೀನಾಮೆ ಕೇಳಿಲ್ಲ. ಕೇವಲ ಮುಸಲ್ಮಾನರೇ ಕಾಣೋದಾ ನಿಮ್ಮ ಕಣ್ಣಿಗೆ? ಕ್ರಿಸ್ಟಲ್ ಅನ್ನೋ ಕಂಪನಿ 205 ಜನರನ್ನ ನೇಮಕ ಮಾಡಿದೆ. ಅದರಲ್ಲಿ ಮಹಮ್ಮದ್ ಜಯಿದ್ ಅನ್ನೋ ಒಬ್ಬ ಮಾತ್ರ ಬೆಡ್ ಹಂಚಿಕೆಯಲ್ಲಿರೋದು. ಉಳಿದವರು ಹೆಲ್ಪ್ ಲೈನ್ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಶವ ಸಂಸ್ಕಾರ ಮಾಡಿದ್ದು ನಾವು:
2020ರಲ್ಲೂ 500ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ್ದು ನಾವು. ಈಗಲು ಮಾಡುತ್ತಿದ್ದೇವೆ. ನೀವು ಈ ರೀತಿ ಚೀಫ್ ರಾಜಕೀಯ ಮಾಡೋದು ಬೇಡ. ಸತೀಶ್ ರೆಡ್ಡಿ ಅವರೇ ಮದರಸ ಮಾಡೋಕೆ ಹೊರಟಿದ್ದಾರೆ ಅಂತಾರೆ. ತಿಳಿದು ಮಾತಾಡಿ 205ರಲ್ಲಿ 16 ಜನ ಮಾತ್ರ ಮುಸಲ್ಮಾನರು. ಪಂಚರ್ ಹಾಕೋರು ನಾವು. ಅನ್ ಎಜ್ಯುಕೆಟೆಡ್ ಹೌದು ಸ್ವಾಮಿ ಆದರೆ ನಿಮ್ಮ ಕಾರು ಪಂಚರ್ ಆದರು ನಮ್ಮ ಹತ್ರನೆ ಬರಬೇಕು ಎಂದು ವ್ಯಂಗ್ಯ ಮಾಡಿದರು.

ಹುಷಾರ್ ಎಷ್ಟು ಅಂತ ಸಹಿಸಿಕೊಳ್ಳಬೇಕು:
ಮುಸಲ್ಮಾನರು ಈ ದೇಶದ ಸ್ವಾತಂತ್ರಕ್ಕೆ ಹೋರಾಡಿದ್ದಾರೆ. ಇಂಡಿಯ ಗೇಟಲ್ಲಿ ಹೆಸರಿದೆ ಹೋಗಿ ನೋಡಿ. ಇಸ್ಲಾಂ ಧರ್ಮದಲ್ಲಿ ಜಾತಿ ಅಂತ ಇಲ್ಲಾ. 400 ಜನ ಹಿಂದೂಗಳು ಇದ್ದರೆ ನಾವು ಹೋಗಿ ವಾಸ ಮಾಡೋ ಹಾಗಿಲ್ಲ. ನಾವು ನಾನ್ ವೆಜ್ ತಿಂತಿವಿ ಅಂತ ಪರ್ಮಿಷನ್ ತಗೊಂಡು ವಾಸ ಮಾಡಬೇಕು. ಇನ್ನೊಮ್ಮೆ ಜಾತಿ ಮಾಡಿದರೆ ಹುಷಾರ್ ಎಷ್ಟು ಅಂತ ಸಹಿಸಿಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯಗೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಚಿವರು, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು? – ತೇಜಸ್ವಿ ಸೂರ್ಯ ವಿರುದ್ಧ ಸಿದ್ದರಾಮಯ್ಯ ಕಿಡಿ

ಮುಸ್ಲಿಂ ದೇಶದ ಆಕ್ಸಿಜನ್ ಬೇಡ ಅನ್ನಬೇಕಿತ್ತು:
ಕತಾರ್, ಸೌದಿ ಅರೆಬಿಯಾದಿಂದ ಆಕ್ಸಿಜನ್ ಬಂದಿದೆ. ಬರಿ ಮುಸ್ಲಿಮರಿಗೆ ಹಾಕಿ ಅಂತ ಹೇಳಿ ಕಳುಹಿಸಿದ್ದಾರಾ? ಮುಸ್ಲಿಂ ದೇಶದ ಆಕ್ಸಿಜನ್ ಬೇಡ ಅನ್ನಬೇಕಿತ್ತು. ನಾಚಿಕೆ ಆಗಬೇಕು ನಿಮಗೆ. ನಾನು ಮುಸ್ಲಿಂ ಇರಬಹುದು, ನಾನು ಹಿಂದುಸ್ಥಾನಿ. ಮೊದಲು ಆಮೇಲೆ ಕನ್ನಡಿಗ ಆಮೇಲೆ ನಾನೊಬ್ಬ ಮುಸ್ಲಿಂ ಎಂದು ಎದೆ ತಟ್ಟಿಕೊಂಡರು. ಯಾವನೇ ಆಗಲಿ ತಪ್ಪು ಮಾಡಿದ್ದರೆ ಗಲ್ಲು ಶಿಕ್ಷೆ ಆಗಬೇಕು. ನಿಮ್ಮ ವೈಫಲ್ಯತೆ ಮುಚ್ಚೋಕೆ ಹೀಗೆ ಆರೋಪ ಮಾಡಿದ್ದಾರೆ. ಚಾಮರಾಜನಗರದ ದುರಂತವನ್ನ ಮರೆಮಾಚಲು ಈ ವಿಷಯ ತಂದಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?

ಇವರಲ್ಲಿ ಎಷ್ಟು ವಿಷ ಇರಬೇಕು:
16 ಜನರಿಗೆ ನೋಟಿಸ್ ಕೊಟ್ಟಿದ್ದಾರೆ. ನಿಮಗೆ ಕೆಲಸದಿಂದ ತಗೆದರೆ ನಾನು 15 ಸಾವಿರ ಸಂಬಳ ಕೊಡ್ತಿನಿ. 5 ತಿಂಗಳು ಕೆಲಸ ಕೊಡುವೆ. ನನ್ನ ಜೊತೆ 5 ತಿಂಗಳು ಹಿಂದು ಮುಸ್ಲಿಂ ನೋಡದೆ ಎಲ್ಲರ ಸೇವೆ ಮಾಡಿ ಎಂದು ಧೈರ್ಯ ತುಂಬಿದರು. 205 ಜನರಲ್ಲಿ 16 ಜನರ ಪಟ್ಟಿ ಮಾಡಬೇಕಾದರೆ ಇವರಲ್ಲಿ ಎಷ್ಟು ವಿಷ ಇರಬೇಕು. ಸೋಶಿಯಲ್ ಮೀಡಿಯದಲ್ಲಿ ಹೆಣ್ಣು ಮಕ್ಕಳು ಬೈಯುತ್ತಿದ್ದಾರೆ. ಬಾಯಲ್ಲಿ ಲಡ್ಡು ಇಟ್ಟುಕೊಂಡಿದ್ದಿರಾ? ಸಂಸತ್ ನಲ್ಲಿ ಆಕ್ಸಿಜನ್ ಬಗ್ಗೆ ಒಂದು ದಿನವಾದರು ಬಾಯಿ ಬಿಟ್ಟರಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ದಂಧೆಯ ಅತೀ ದೊಡ್ಡ ಜಾಲ – ಇಬ್ಬರು ವೈದ್ಯರು ಸೇರಿ 17 ಮಂದಿ ಅರೆಸ್ಟ್

ಇದೆನಾ ಅಚ್ಛೇ ದಿನ್:
ಈಶ್ವರಪ್ಪ ಸೀನಿಯರ್ ಲೀಡರ್ ನೋಡಿ ಮಾತಾಡಿ. ಸುಮ್ಮನೆ ಮುಸಲ್ಮಾನ್ ಮುಸಲ್ಮಾನ್ ಅಂತ ಸಾಯಬೇಡಿ. ಮುಸಲ್ಮಾನರ ಹೆಸರು ಹೇಳಿದರೆ ಹಿಂದೂಗಳು ಒಟ್ಟಾಗಿ ವೋಟು ಕೊಡ್ತಾರೆ ಅನ್ನೋದು ಬಿಜೆಪಿ ಲೆಕ್ಕಾಚಾರ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. ಇದೆನಾ ಸಬ್ ಕಾ ಸಾಥ್ 16 ಜನರ ಹೆಸರು ಹೇಳೋದು. ಪ್ರಧಾನಿಗಳು ಅಚ್ಛೇ ದಿನ್ ಆಯೇಗಾ ಅಂದ್ರು. ಇದೆನಾ ಅಚ್ಛೇ ದಿನ್, ನಮಗೆ ಅಚ್ಛೆ ದಿನ್ ಬೇಡ. ನಮಗೆ ನಮ್ಮ ಹಳೆ ದಿನವೇ ಸಾಕು ಎಂದು ಹಲ್ಲು ಕಡಿದರು. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ದಂಧೆಯನ್ನು ಮುಸ್ಲಿಂ ಸಂಘಟನೆಯೇ ಮಾಡಿರುವ ಅನುಮಾನವಿದೆ: ಈಶ್ವರಪ್ಪ

Share This Article
Leave a Comment

Leave a Reply

Your email address will not be published. Required fields are marked *