ಇಲ್ಲಿಂದ ಬೋಳಿಸಿಯೇ ಕಳಿಸೋದು: ಧನುಶ್ರೀ

Public TV
1 Min Read

ಬೆಂಗಳೂರು: ಬಿಗ್‍ಬಾಸ್ ಆರಂಭದ ಮೊದಲ ದಿನವೇ ಆಟ ಶುರುವಾಗಿದ್ದು, ನಾಲ್ಕು ಜನ ಮನೆಯಿಂದ ಹೊರ ಹೋಗೋಕೆ ನಾಮಿನೇಟ್ ಆಗಿದ್ದಾರೆ. ಈ ನಡುವೆ ಟಿಕ್‍ಟಾಕ್ ಸ್ಟಾರ್ ಧನುಶ್ರೀ ಮತ್ತು ಶಮಂತ್ ಗೌಡ ನಡುವೆ ಫನ್ನಿ ಮಾತು ನಡೆತಯುತ್ತಿದೆ.

ಧನುಶ್ರೀ ಬಿಗ್‍ಬಾಸ್ ಮನೆಗೆ ಮೊದಲ ಬಂದ ಸ್ಪರ್ಧಿ. ಬಿಗ್‍ಬಾಸ್ ಆರಂಭಕ್ಕೂ ಮುನ್ನ ದೊಡ್ಮನೆಗೆ ಬಂದಿದ್ದ ಸುದೀಪ್ ಬಚ್ಚಿಟ್ಟಿದ್ದ ಚೆಂಡುಗಳನ್ನು ಹುಡುಕುವ ಕೆಲಸವನ್ನ ಧನುಶ್ರೀಗೆ ನೀಡಲಾಗಿತ್ತು. ಬಿಗ್‍ಬಾಸ್ ಸೂಚನೆಯಂತೆ ಮೊದಲ ಸ್ಪರ್ಧಿಯಾಗಿ ಬಂದ ಧನುಶ್ರೀ ಬಚ್ಚಿಟ್ಟಿದ್ದ ಎಲ್ಲ 17 ಚೆಂಡುಗಳನ್ನ ಹುಡುಕಿ ತಮ್ಮ ಬಳಿ ಇರಿಸಿಕೊಂಡಿದ್ದರು. ಆದ್ರೆ ಬೆಳಗ್ಗೆ ದಿವ್ಯಾ 17ರಲ್ಲಿಯ ಒಂದು ಚೆಂಡನ್ನು ಧನುಶ್ರೀಗೆ ಹೇಳದೇ ಎತ್ತಿಟ್ಟುಕೊಂಡರು.

ಕೆಲವೇ ಕ್ಷಣಗಳಲ್ಲಿ ಚೆಂಡುಗಳನ್ನ ಎಲ್ಲರಿಗೂ ಹಂಚುವಂತೆ ಧನುಶ್ರೀಗೆ ಸೂಚಿಸಿದ್ರು. ಆದ್ರೆ ಒಂದು ಚೆಂಡು ಕಾಣಿಸುತ್ತಿಲ್ಲ ಎಂದು ಹೇಳಿದ ಧನುಶ್ರೀ 16 ಬಾಲ್ ಎಲ್ಲರಿಗೂ ಹಂಚಲು ಮುಂದಾದ್ರು. ಈ ವೇಳೆ ಶಮಂತ್ ಗೌಡ ಮೇಲೆ ಅನುಮಾನ ವ್ಯಕ್ತಪಡಿಸಿದ ಧನುಶ್ರೀ, ಬಾಲ್ ನೀಡಲು ಹಿಂದೇಟು ಹಾಕಿದರು. ಆವಾಗ ನಿಮ್ಮ ಕೂದಲಿನ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ಚೆಂಡು ತೆಗೆದುಕೊಂಡಿಲ್ಲ ಎಂದು ಹೇಳಿದಾಗ ಮುನಿಸಿಕೊಂಡ ಧನುಶ್ರೀ ನನ್ನ ಕೂದಲು ಮೇಲೆ ಯಾಕೆ ಆಣೆ ಮಾಡ್ತೀರಿ. ನಿಮ್ಮ ಕೂದಲಿನ ಮೇಲೆ ಆಣೆ ಮಾಡಿ. ಇಲ್ಲಿಂದ ಹೋಗುವಷ್ಟರಲ್ಲಿ ನಿಮ್ಮ ಕೂದಲು ಬೋಳಿಸಿಯೇ ಕಳಿಸೋದು ಎಂದು ಹೇಳಿ ನಕ್ಕರು.

ಬಿಗ್‍ಬಾಸ್ ನೀಡಿದ ಮೊದಲ ಟಾಸ್ಕ್ ನಲ್ಲಿ ಗೆದ್ದ ಶಮಂತ್ ಗೌಡ್ ಈ ವಾರದ ವಿನ್ನರ್ ಪಟ್ಟದ ಜೊತೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ನಿರ್ಮಲಾ, ಧನುಶ್ರೀ, ಮಂಜು ಪಾವಗಡ, ನಿಧಿ ಮತ್ತು ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *