ಇಬ್ಬರು ಮಂಗಳಮುಖಿಯರು ಸೇರಿ ಮೂವರ ಕತ್ತು ಕೊಯ್ದು ಕೊಲೆ

Public TV
1 Min Read

-ಕೊಂದು ಹೈವೇ ಪಕ್ಕದ ಕಣಿವೆಯಲ್ಲಿ ಎಸೆದು ಪರಾರಿ

ಚೆನ್ನೈ: ಇಬ್ಬರು ಮಂಗಳಮುಖಿಯರು ಸೇರಿ ಮೂವರ ಕತ್ತು ಕೊಯ್ದು ಕೊಲೆಗೈದಿರುವ ಘಟನೆ ತಮಿಳುನಾಡಿನ ಪಾಲಯಂಕೊಟೈನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಅನುಷ್ಕಾ (35), ಭವಾನಿ (34) ಮತ್ತು ಮುರುಗನ್ (38) ಕೊಲೆಯಾದವರು. ಮುರುಗನ್ ಮಂಗಳಮುಖಿಯರಾದ ಅನುಷ್ಕಾ ಮತ್ತು ಭವಾನಿ ಇಬ್ಬರನ್ನು ಮದುವೆಯಾಗಿದ್ದನು. ಮೂವರು ಮಗು ದತ್ತು ಪಡೆಯಲು ನಿರ್ಧರಿಸಿದ್ದರು. ಮೂವರು ಮಗುವಿಗಾಗಿ ಋಷಿಕೇಶ್ ಎಂಬಾತನನ್ನು ಸಂಪರ್ಕಿಸಿದ್ದರು. ಋಷಿಕೇಶ್ ಮಗು ಕೊಡಿಸುವದಾಗಿ ಹೇಳಿ ಮೂವರಿಂದ ಐದು ಲಕ್ಷ ರೂ. ಪಡೆದುಕೊಂಡಿದ್ದನು.

ಮುರುಗನ್

ಹಣ ಪಡೆದ ಋಷಿಕೇಶ್ ಪ್ರತಿದಿನ ಒಂದಿಲ್ಲೊಂದು ನೆಪ ಹೇಳಿ ದಿನಗಳನ್ನ ಮುಂದೂಡುತ್ತಾ ಬಂದಿದ್ದನು. ಮೂವರು ಋಷಿಕೇಶ್ ವಿರುದ್ಧ ಮೋಸದ ಬಗ್ಗೆ ಆರೋಪ ಮಾಡಿದ್ದರು. ಮಗು ನೀಡದಕ್ಕೆ ಕೋಪಗೊಂಡಿದ್ದ ಮುರುಗನ್, ಸೋಶಿಯಲ್ ಮೀಡಿಯಾದಲ್ಲಿ ಋಷಿಕೇಶ್ ಸೋದರಿಯ ಬಗ್ಗೆ ಕೆಟ್ಟದಾಗಿ ಬರೆದುಕೊಂಡಿದ್ದನು.

ಋಷಿಕೇಶ್

ಮುರುಗನ್ ವರ್ತನೆಯಿಂದ ಕೋಪಗೊಂಡ ಋಷಿಕೇಶ್ ತನ್ನಿಬ್ಬರ ಗೆಳೆಯರ ಜೊತೆ ಸೇರಿ ಮೂವರ ಕತ್ತು ಕೊಯ್ದು ಕೊಲೆ ಮಾಡಿ, ಹೆದ್ದಾರಿ ಪಕ್ಕದ ಕಣಿವೆಯಲ್ಲಿ ಶವಗಳನ್ನು ಬಿಸಾಕಿದ್ದನು. ಸದ್ಯ ಶವಗಳನ್ನು ಕಣಿವೆಯಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *