ಇದ್ದಕ್ಕಿದ್ದಂತೆ ಕಬಿನಿಂದ ನೀರು ಬಿಟ್ಟ ಅಧಿಕಾರಿಗಳು, ಸೇತುವೆ ಮುಳುಗಡೆ- ಜನ ಕಂಗಾಲು

Public TV
1 Min Read

ಮೈಸೂರು: ಯಾವುದೇ ಮುನ್ಸೂಚನೆ, ಸೈರನ್ ಇಲ್ಲದೆ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಬಿಡುವ ಮೂಲಕ ಜಲಾಶಯದ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.

ಡ್ಯಾಂ ಭರ್ತಿಯಾಗುತ್ತಿದೆ ಎಂಬ ಮಾಹಿತಿಯನ್ನು ನೀಡದೆ ಅಪಾರ ಪ್ರಮಾಣದ ನೀರನ್ನು ತಡರಾತ್ರಿ ಎಚ್.ಡಿ.ಕೋಟೆಯ ಕಬಿನಿ ಡ್ಯಾಂ ನಿಂದ ನದಿಗೆ ಬಿಟ್ಟಿದ್ದು, ಸೇತುವೆ ಮುಳುಗಡೆಯಾಗಿದೆ. ಇದನ್ನು ಕಂಡ ಸ್ಥಳೀಯರು ಕಂಗಾಲಾಗಿದ್ದಾರೆ. ಗೇಟ್ ಹಾಕದೆ, ಸೈರನ್ ಮಾಡದೆ, ಯಾವುದೇ ರೀತಿಯ ಮುನ್ಸೂಚನೆ ನೀಡದೆ ನದಿಗೆ ನೀರು ಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಬೀಚನಹಳ್ಳಿಯಲ್ಲಿರುವ ಡ್ಯಾಂ ನಲ್ಲಿ ಅಧಿಕಾರಿಗಳಿಂದ ಈ ಅವಾಂತರ ನಡೆದಿದೆ. ಡ್ಯಾಂ ಭರ್ತಿಯಾಗುತ್ತಿದೆ ಎಂದು ಇದೀಗ 30 ಸಾವಿರ ಕ್ಯೂಸೆಕ್ ನೀರನ್ನು ಅಧಿಕಾರಿಗಳು ಹರಿಸಿದ್ದಾರೆ.

ಅಪಾರ ಪ್ರಮಾಣದ ನೀರು ಬಿಟ್ಟಿದ್ದಕ್ಕೆ ಹಾಗೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದಕ್ಕೆ ಜೀವ ಭಯದಲ್ಲಿ ಜನ ಒಂದು ಬದಿಯಿಂದ ಮತ್ತೊಂದಿ ಬದಿಗೆ ತೆರಳಿದ್ದಾರೆ. ಕೂಡಲೇ ಸ್ಥಳೀಯರು ಡ್ಯಾಂನ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಎಚ್ಚೆತ್ತು ಅಧಿಕಾರಿಗಳು ನೀರಿನ ಪ್ರಮಾಣ ಕಡಿಮೆ ಮಾಡಿದ್ದಾರೆ. ಡ್ಯಾಂ ಮುಂಭಾದಲ್ಲಿರುವ ಬಿದರಳ್ಳಿ ಸಂಪರ್ಕದ ಸೇತುವೆ ಬಳಿ ಇದ್ದಕ್ಕಿದ್ದಂತೆ ನೀರು ಹೆಚ್ಚಾಗಿದ್ದನ್ನು ಕಂಡು ಸೇತುವೆ ಮೇಲೆ ತೆರಳುತ್ತಿದ್ದವರು ಗಾಬರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *