ಇದು ವಿಜಯೇಂದ್ರ, ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು: ಸೋಮಣ್ಣ

Public TV
3 Min Read

ಬೆಂಗಳೂರು: ಇದು ವಿಜಯೇಂದ್ರ, ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿ ಮಾಡಿಕೊಂಡು ಹೋಗ್ತೀವಿ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸ್ಕಿಯಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ 200 ಓಟ್ ನಲ್ಲಿ ಸೋತಿದ್ದರು. ಯಡಿಯೂರಪ್ಪ ಆಡಳಿತ ಮೆಚ್ಚಿ ಪ್ರತಾಪ್ ಗೌಡ ಪಾಟೀಲ್ ಅವರು ಬಿಜೆಪಿಗೆ ಬಂದ್ರು. ಕೆಲವೊಂದು ಸಾರಿ ಒಳ್ಳೆ ಕೆಲಸ ಮಾಡಿದ್ರು ಸೋಲ್ತಾರೆ. ನಾನು 2009ರಲ್ಲಿ ಸೋತಿದ್ದೆ. ಸೋಲು-ಗೆಲುವು ಒಟ್ಟಾಗಿ ಸ್ವೀಕಾರ ಮಾಡಬೇಕು ಎಂದರು.

ಬಿಜೆಪಿ ಅವರು ಸೋಲಿಗೆ ಕಾರಣ ಅನ್ನೋ ಪ್ರತಾಪ್ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾಕೆ ಹಾಗೆ ಮಾತಾಡಿದ್ರು ಗೊತ್ತಿಲ್ಲ. ಅವರ ಜೊತೆ ಮಾತಾಡ್ತೀನಿ. ಇದು ವಿಜಯೇಂದ್ರ ಅಥವಾ ಪ್ರತಾಪ್ ಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿ ಮಾಡಿಕೊಂಡು ಹೋಗ್ತೀವಿ ಎಂದು ತಿಳಿಸಿದರು.

ಯಡಿಯೂರಪ್ಪ ಕೂಡಾ ಎರಡು ದಿನ ಪ್ರಚಾರ ಮಾಡಿದ್ರು. ಜನ ಬದಲಾವಣೆ ಬೇಕು ಅಂತ ಹೀಗೆ ಮಾಡಿರಬಹುದು. ಮುಂದೆ ತಪ್ಪು ತಿದ್ದುಪಡಿ ಮಾಡಿಕೊಳ್ತೀವಿ. ಸೋಲು-ಗೆಲುವು ಸಹಜ. ಪಾರ್ಟಿ ಕೆಲಸ ಎಲ್ಲರೂ ಮಾಡಿದ್ದಾರೆ. ಜವಾಬ್ದಾರಿ ನಿಭಾಯಿಸಿದ್ದೇವೆ. ಸೋತಾಗ ವಿಜಯೇಂದ್ರ ಸೋಲು ಅನ್ನೋದು ಸರಿಯಲ್ಲ ಎಂದು ಹೇಳಿದರು.

ಬಸವ ಕಲ್ಯಾಣದಲ್ಲಿ ನಾವು ಟೀಂ ವರ್ಕ್ ಮಾಡಿದ್ದೇವೆ. ಟೀಂ ವರ್ಕ್ ಮಾಡಿದ್ದಕ್ಕೆ ಗೆಲುವು ಆಯ್ತು. ಭಿನ್ನಾಭಿಪ್ರಾಯ ಸರಿ ಮಾಡಿ ಟೀಂ ವರ್ಕ್ ಮಾಡಿ ಗೆದ್ದೆವು. ಕಟೀಲು ಎರಡು ಬಾರಿ ಪ್ರಚಾರ ಮಾಡಿದ್ರು. ನಾನು, ಸವದಿ, ಬೊಮ್ಮಾಯಿ 3 ಜನ 6 ಜಿಲ್ಲಾ ಪಂಚಾಯ್ತಿ ಆಯ್ಕೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ವಿ. ನಾನು ಚುನಾವಣೆಗೆ ಇಳಿದ್ರೆ ಹಿಂದೆ ತಿರುಗಿ ನೋಡೊಲ್ಲ. ಯಾರು ನಿರೀಕ್ಷೆ ಮಾಡದ ಗೆಲುವನ್ನು ನಾವು ಗೆದ್ದಿದ್ದೇವೆ. ಯಡಿಯೂರಪ್ಪ, ಮೋದಿ ಅವ್ರ ಮೇಲೆ ಭರವಸೆ ಇಟ್ಟು ಜನ ಮತ ಕೊಟ್ಟಿದ್ದಾರೆ. ನಮ್ಮ ಅಭ್ಯರ್ಥಿ ಆಕ್ಟೀವ್ ಆಗಿದ್ದಾರೆ. ಟೀಂ ವರ್ಕ್ ಮಾಡಿದ್ರೆ ಗೆಲುವು ಶತಸಿದ್ಧ ಅಂತ ಈ ಕ್ಷೇತ್ರದ ಗೆಲುವಿಂದ ಗೊತ್ತಾಗಿದೆ ಎಂದು ನುಡಿದರು.

ನಾನು ಸತ್ಯ ಮಾತಾಡ್ತೀನಿ. ನಾನು ಎಕೆ 47 ಇದ್ದ ಹಾಗೇ. ಇರೋದನ್ನ ಹೇಳ್ತೀನಿ. ಮಸ್ಕಿಯಲ್ಲಿ ಏನ್ ಆಗಿದೆ ಗೊತ್ತಿಲ್ಲ. ನಾನು ಅ ಕಡೆ ಹೋಗಿಲ್ಲ. ಎಲ್ಲವನ್ನು ವಿಜಯೇಂದ್ರ ಮೇಲೆ ಹಾಕೋದು ಸರಿಯಲ್ಲ. ಕೆಲವರಲ್ಲಿ ದೌರ್ಬಲ್ಯ ಇದೆ. ಅದನ್ನ ಸರಿ ಮಾಡಿಕೊಂಡು ಹೋಗಬೇಕು. ನನಗೂ ಕೆಲ ದೌರ್ಬಲ್ಯ ಇರುತ್ತೆ. ಅದನ್ನ ಸರಿ ಮಾಡಿಕೊಳ್ಳಬೇಕು.

ಕೊರೊನಾ ಕಾರ್ಯವೈಖರಿಯಲ್ಲಿ ನಾವು ಎಡವಿಲ್ಲ. ಆದರೆ ಹೆಚ್ಚು ಕೇಸ್ ಆಗಿರೋದ್ರೀಂದ ಸ್ವಲ್ಪ ಹಿನ್ನಡೆ ಆಗಿದೆ. ಉಪ ಚುನಾವಣೆ ಮೇಲೆ ಕೊರೊನಾ ನಿರ್ವಹಣೆಯೂ ಸ್ವಲ್ಪ ಪರಿಣಾಮ ಬೀರಿದೆ. ಜನರ ಕಷ್ಟಕ್ಕೆ ಶೇ.100 ಸಹಕಾರ ಕೊಡಲು ಆಗಿಲ್ಲ. ಹೀಗಾಗಿ ಇದು ನಮಗೆ ಹಿನ್ನಡೆ ಆಗಿದೆ. ಇದನ್ನ ಮುಂದಿನ ದಿನಗಳಲ್ಲಿ ಸರಿ ಮಾಡಿಕೊಳ್ಳೊ ಕೆಲಸ ಮಾಡ್ತೀವಿ ಎಂದು ತಿಳಿಸಿದರು.

ಅಣ್ಣಮ್ಮ ತಾಯಿಯಲ್ಲಿ ನಾನು ಬೇಡಿ ಕೊಳ್ತೀನಿ. ಈ ಸಂಕಷ್ಟ ವನ್ನ ನಿಭಾಯಿಸಬೇಕು. ಭಗವಂತನ ಆಶೀರ್ವಾದ ಇರದೆ ಇದನ್ನ ಸಾಧನೆ ಮಾಡಲು ಸಾಧ್ಯವಿಲ್ಲ. ನಾವು ಪ್ರಯತ್ನಗಳು ಮಾಡ್ತಿದ್ದೇನೆ. ಭಗವಂತ ಆಶೀರ್ವಾದ ಮಾಡಬೇಕು. ಇಲ್ಲದೆ ಹೋದ್ರೆ ಕಷ್ಟ ಆಗುತ್ತೆ. ನಾವು ಮಾಡೋ ಕೆಲಸ ಮಾಡ್ತಿದ್ದೇವೆ. ಆದ್ರು ಕಡಿಮೆ ಆಗ್ತಿಲ್ಲ. ದೇವರ ಅನುಗ್ರಹ ನಮಗೆ ಬೇಕಿದೆ. ಖಾಸಗಿ ಆಸ್ಪತ್ರೆಗಳ ನಡೆ ಕರುಳಿ ಕಿತ್ತುಹೋಗುತ್ತೆ. ಜೀವನ ಕಟ್ಟುಕೊಳ್ಳಲು ಜನ ಬೆಂಗಳೂರಿಗೆ ಬಂದಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಕೆಲಸ ಸರ್ಕಾರ ಮಾಡ್ತಿದೆ. ಕೊರೊನಾ ನಿಯಂತ್ರಣಕ್ಕೆ ದೇವರೇ ಕಾಪಾಡಬೇಕು. ಸರ್ಕಾರದ ಸಾಧ್ಯವಾದಷ್ಟು ಕೆಲಸ ಮಾಡ್ತಿದೆ. ಆದ್ರು ಕೊರೊನಾ ನಿಯಂತ್ರಣ ಆಗಿಲ್ಲ. ದೇವರ ಅನುಗ್ರಹ ಇದ್ದರೇನೆ ಇದನ್ನ ನಿಯಂತ್ರಣ ಮಾಡಲು ಸಾಧ್ಯ ಎಂದು ಸೋಮಣ್ಣ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *