ಇಂದೇ ಪಂಚ ರಾಜ್ಯಗಳ ಭವಿಷ್ಯ – ಬಂಗಾಳ ಫಲಿತಾಂಶವೇ ಕುತೂಹಲ

Public TV
1 Min Read

– ತಮಿಳಿನಾಡಿನಲ್ಲಿ ಮತ್ತೆ ಉದಯಿಸ್ತಾನಾ ಸೂರ್ಯ..?

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಫಲಿತಾಂಶ, ರಾಜ್ಯದ 2 ವಿಧಾನಸಭೆ ಮತ್ತು ಬೆಳಗಾವಿ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ.

ಬೆಳಗ್ಗೆ 8 ಗಂಟೆಯಿಂದ ಕೊರೊನಾ ನಿಯಮಗಳ ಅನುಸಾರ ಮತ ಎಣಿಕೆ ನಡೆಯಲಿದೆ. ಎಕ್ಸಿಟ್ ಪೋಲ್‍ಗಳ ಪ್ರಕಾರ, ಪಶ್ಚಿಮ ಬಂಗಾಳ ಗೆಲ್ಲಲು ಬಿಜೆಪಿ ಮತ್ತು ಟಿಎಂಸಿಗೆ ಸಮಾನ ಅವಕಾಶಗಳಿವೆ. ಕೇರಳದಲ್ಲಿ ಎಲ್‍ಡಿಎಫ್, ತಮಿಳುನಾಡಲ್ಲಿ ಡಿಎಂಕೆ, ಅಸ್ಸಾಂ ಮತ್ತು ಪುದುಚೆರಿಯಲ್ಲಿ ಬಿಜೆಪಿ ಗೆಲ್ಲಬಹುದು.

ರಾಜ್ಯದ ಮಸ್ಕಿ, ಬಸವಕಲ್ಯಾಣ ಹಾಗೂ ಬೆಳಗಾವಿ ಲೋಕಸಭೆ ಉಪ ಚುನಾವಣೆ ಫಲಿತಾಂಶವೂ ಹೊರಬೀಳಲಿದೆ. ಬೆಳಗಾವಿಯಲ್ಲಿ ಬಿಜೆಪಿ ಗೆಲ್ಲೋ ಸಾಧ್ಯತೆ ಹೆಚ್ಚಿದೆ. ಮಸ್ಕಿ, ಬಸವಕಲ್ಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಫಿಫ್ಟಿ ಚಾನ್ಸ್ ಇದೆ. ಹಾಗೇ ನೋಡಿದ್ರೆ, ರಾಜ್ಯದಲ್ಲಿ ಕೊರೋನಾ ಅಬ್ಬರದಿಂದ ಈ 3 ಉಪ ಚುನಾವಣೆಗಳ ಫಲಿತಾಂಶ ಮಹತ್ವ ಕಳೆದುಕೊಂಡಿದೆ.

3 ಉಪ ಚುನಾವಣೆಗಳ ಮಧ್ಯೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚ್ಚೇರಿ ಹಾಗೂ ಅಸ್ಸಾಂ ರಾಜ್ಯಗಳ ಮತ ಎಣಿಕೆಯೂ ನಡೆಯುತ್ತಿದೆ. ಪಂಚ ರಾಜ್ಯಗಳ ಪೈಕಿ, ಪಶ್ಚಿಮ ಬಂಗಾಳದ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *