ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತ

Public TV
1 Min Read

ಮೈಸೂರು: ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತವಾಗಿದೆ.

ನಂಜನಗೂಡಿನಲ್ಲಿ ಕಪಿಲಾ ಅಬ್ಬರ ಕಡಿಮೆಯಾಗಿದ್ದು, ಬ್ಯಾರಿಕೇಡ್‍ಗಳನ್ನ ತೆಗೆದು ಹಾಕುವ ಮೂಲಕ ಪೊಲೀಸರು ಮೈಸೂರು-ಊಟಿ ಸಂಚಾರ ಮುಕ್ತ ಮಾಡಿದ್ದಾರೆ. ಕಪಿಲಾ ನದಿಯ ನೀರು ರಾಷ್ಟ್ರೀಯ ಹೆದ್ದಾರಿಯ ಮಲ್ಲನಮೂಲೆ ಮಠದ ಬಳಿ ರಸ್ತೆವರೆಗೂ ಹರಿದು ಬಂದಿತ್ತು. ಹೀಗಾಗಿ ಕಳೆದ ಮೂರು ದಿನಗಳಿಂದ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.

ಶನಿವಾರ ಮೈಸೂರು-ಊಟಿ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿತ್ತು. ಇದರಿಂದ ಮೈಸೂರು ಊಟಿ ರಸ್ತೆಯಲ್ಲಿ ಸಂಚಾರಕ್ಕೆ ಬ್ರೇಕ್ ಬಿದ್ದಿತು. ಮೈಸೂರು-ಊಟಿ ರಸ್ತೆಯಲ್ಲಿದ್ದ ನೀರು ಖಾಲಿಯಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ಕೂಡ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು.

ಇದೀಗ ಕಬಿನಿ ಡ್ಯಾಂನಿಂದ ಕಡಿಮೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ ಇಂದಿನಿಂದ ಮೈಸೂರು-ಊಟಿ ಸಂಚಾರ ಮುಕ್ತವಾಗಿದೆ. ಕಪಿಲೆಯ ಅಬ್ಬರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಂಜನಗೂಡಿನ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ನಂಜನಗೂಡಿನಲ್ಲಿ ಪ್ರವಾಹದ ಆತಂಕ ದೂರವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *