ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು- ಅಂಬುಲೆನ್ಸ್ ಗ್ಲಾಸ್ ಪುಡಿಗೈದ ಕುಟುಂಬಸ್ಥರು

Public TV
1 Min Read

ವಿಜಯಪುರ: ಕೊವಿಡ್ 19 ರೋಗಿ ಇರುವ ಶಂಕೆಯ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡದ ಕಾರಣ ಸಾವಿನ್ನಪ್ಪಿದ್ದಾನೆಂದು ಆರೋಪಿಸಿ ಆಸ್ಪತ್ರೆ ಎದುರು ಸಂಬಂಧಿಕರು ಗಲಾಟೆ ನಡೆಸಿದ ಘಟನೆ ವಿಜಯಪುರ ದಲ್ಲಿ ನಡೆದಿದೆ.

ನಗರದ ಬಂಜಾರಾ ಆಸ್ಪತ್ರೆಯ ಎದುರು ಭಾನುವಾರ ತಡರಾತ್ರಿ ಗಲಾಟೆ ನಡೆದಿದ್ದು, ಗಲಾಟೆ ವೇಳೆ ಆಸ್ಪತ್ರೆಯ ಅಂಬುಲೆನ್ಸ್ ಮೇಲೆ ಸಾವನ್ನಪ್ಪಿರುವ ರೋಗಿಯ ಸಂಬಂಧಿಕರು ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದ್ದು, ಅಂಬುಲೆನ್ಸ್ ಗ್ಲಾಸ್ ಪುಡಿ, ಪುಡಿ ಆಗಿದೆ.

ಕೊರೊನಾ ಲಕ್ಷಣ ಹಿನ್ನೆಲೆಯಲ್ಲಿ ಇಂಡಿ ತಾಲೂಕಿನ ಹೊರ್ತಿ ಬಳಿಯ ಹಡಲಸಂಗ ತಾಂಡಾ ನಿವಾಸಿ ಕಾಶಿನಾಥ್ ಚೌಹ್ಹಾಣ್ (59) ಅವರನ್ನು ಆಗಸ್ಟ್ 17ರಂದು ಬಂಜಾರಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಶೇ.50 ರಷ್ಟು ಲಂಗ್ಸ್ ಹಾಳಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಅಲ್ಲದೆ ಕೊರೊನಾ ಸೋಂಕು ಕೂಡ ತಗುಲಿದೆ ಎಂದು ತಿಳಿಸಿದ್ದಾರೆ. ನಿನ್ನೆ ರಾತ್ರಿ ಕಾಶಿನಾಥ್ ಸಾವನ್ನಪ್ಪಿದ್ದಾರೆ. ಅನಾವಶ್ಯಕವಾಗಿ ನಿದ್ರೆ ಇಂಜೆಕ್ಷನ್ ನೀಡಿದ್ದರಿಂದ ಕಾಶಿನಾಥ್ ಸಾವಾಗಿದೆ. ರೋಗಿ ಆಕ್ಸಿಜನ್ ಪೈಪ್ ಕೀಳ್ತಿದ್ರೆ ಆಸ್ಪತ್ರೆ ಸಿಬ್ಬಂದಿ ನಿದ್ರೆ ಇಂಜೆಕ್ಷನ್ ನೀಡಿದ್ದರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಸ್ಪತ್ರೆಯವರು ಈವರೆಗೆ 6 ಲಕ್ಷ ಹಣ ಕಟ್ಟಿಸಿಕೊಂಡು, ಈಗ ಮತ್ತೆ 3 ಲಕ್ಷ ಹಣ ಕಟ್ಟಲು ಒತ್ತಾಯ ಮಾಡಿದ್ದಾರೆ. ಕಾರಣ ರೊಚ್ಚಿಗೆದ್ದ ಕಾಶಿನಾಥ ಕುಟುಂಬಸ್ಥರಿಂದ ಗಲಾಟೆ, ಆಸ್ಪತ್ರೆ ಅಂಬುಲೆನ್ಸ್ ಮೇಲೆ ಕಲ್ಲು ತೂರಾಟ ಮಾಡಿರುವ ಆರೋಪ ಕೇಳಿಬಂದಿದೆ.

ಸ್ಥಳಕ್ಕೆ ಗಾಂಧಿಚೌಕ ಪಿಎಸ್‍ಐ ಆಶೀಪ್ ಮುಶಾಪುರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.

Share This Article
Leave a Comment

Leave a Reply

Your email address will not be published. Required fields are marked *