ಆಸ್ಪತ್ರೆಯಲ್ಲಿ ಕುಡುಕನ ರಂಪಾಟ- ಅಮಲಿನಲ್ಲಿ ಶರ್ಟ್ ಬಿಚ್ಚಿದ

Public TV
1 Min Read

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಾ ಆಸ್ಪತ್ರೆಯಲ್ಲಿ ಕುಡುಕನೋರ್ವ ಶರ್ಟ್ ಬಿಚ್ಚಿ ಬ್ಯಾರಿಕೆಡ್ ತಳ್ಳಿ ರಂಪಾಟ ಮಾಡಿದ್ದಾನೆ. ಇದನ್ನೂ ಓದಿ: ಮಾಸ್ಕ್ ವಿಚಾರಕ್ಕೆ ಕಿರಿಕ್ – ದೊಣ್ಣೆಯಿಂದ ಮಹಿಳೆಗೆ ಬಡಿದ ಯುವತಿ

ತುರುವೇಕೆರೆ ಪಟ್ಟಣದ ನಿವಾಸಿ ಯು.ಬಿ.ಸುರೇಶ್ ಕುಡಿದು ರಂಪಾಟ ಮಾಡಿದ್ದಾನೆ. ಆಸ್ಪತ್ರೆಯ ವ್ಯವಸ್ಥೆ ಸರಿ ಇಲ್ಲ ಎಂದು ಕ್ಯಾತೆ ತೆಗೆದ ಈತ ಕಂಡಕಂಡವರನ್ನು ಮನಬಂದಂತೆ ಅವಾಚ್ಯವಾಗಿ ಬೈದಿದ್ದಾನೆ. ಮಾಸ್ಕ್ , ಸ್ಯಾನಿಟೈಸರ್ ಏನೂ ಹಾಕೊಳ್ಳೋಬೇಡಿ ಎಂದು ಕುಡಿದ ಅಮಲಿನಲ್ಲಿ ಅಪಪ್ರಚಾರ ಮಾಡುತ್ತಿದ್ದ ಈತ ಕುಮಾರಸ್ವಾಮಿ ಸಿದ್ದರಾಮಯ್ಯ ಯಡಿಯೂರಪ್ಪ ಎಲ್ಲರೂ ಸುಳ್ಳರೇ ಇವರಿಂದ ಜನರಿಗೆ ಏನೂ ಉಪಯೋಗ ಆಗಿಲ್ಲ ಎಂದು ಕುಡಿದ ಅಮಲಿನಲ್ಲಿ ಮನಬಂದಂತೆ ಮಾತನಾಡುತ್ತಿದ್ದನು. ಇದನ್ನೂ ಓದಿ:  ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?

ಬ್ಲೀಚಿಂಗ್ ಪೌಡರ್ ತಂದು ತಾನೇ ಆಸ್ಪತ್ರೆಯ ಟಾಯ್ಲೆಟ್ ಕ್ಲೀನ್ ಮಾಡುತ್ತೇನೆ ಎಂದು ಹೇಳುತ್ತಾ ಶರ್ಟ್ ಬಿಚ್ಚಿ ಹುಚ್ಚಾಟ ಮೆರೆದಿದ್ದಾನೆ. ಈತನ ರಂಪಾಟ ಕಂಡ ಆತನ ಸ್ನೇಹಿತರು ಸುರೇಶ್‍ನನ್ನು ಸಮಾಧಾನಪಡಿಸಿ ಸುರಕ್ಷಿತವಾಗಿ ಮನೆ ತಲುಪಿಸಿದ್ದಾರೆ. ಯುಬಿ ಸುರೇಶ್ ಅಕ್ಷರಸ್ಥ(ಸುಶಿಕ್ಷಿತ)ನಾಗಿದ್ದು ಈ ರೀತಿ ರಂಪಾಟ ಮಾಡಿದಕ್ಕೆ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *