ಅಬ್ಬರದ ಮಳೆಗೆ ಮನೆಗಳ ಮೇಲೆ ಉರುಳಿ ಬಿದ್ದ ಮರ

Public TV
1 Min Read

– ಲಕ್ಷಾಂತರ ರೂ. ಹಾನಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಟೋಳಿಯಲ್ಲಿ ಭಾನುವಾರ ರಾತ್ರಿ ಸುರಿದ ಅಬ್ಬರದ ಮಳೆಗೆ ಮರ ಮನೆಗಳ ಮೇಲೆ ಬಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

ಗ್ರಾಮದ ಕಾರ್ಟೋಳಿಯ ಸುರೇಶ್ ಕೇಶಬ್ ವೇಳಿಪ ಇವರ ಮನೆಯ ಮೇಲೆ ಮರ ಬಿದ್ದು ಸುಮಾರು 1 ಲಕ್ಷ 50 ಸಾವಿರ ಹಾನಿ ಸಂಭವಿಸಿದೆ. ಹಾಗೆಯೇ ಮಳೆ-ಗಾಳಿಯಿಂದಾಗಿ ಲಕ್ಷ್ಮಣ್ ಸುಭಾ ವೇಳಿಪ ವಿಜಯ್ ಕೇಶವ್ ವೇಳಿಪ, ಪ್ರೇಮಾನಂದ್ ಗುನೋ ವೇಳಿಪ ಅವರ ಮನೆಗಳಿಗೂ ಹಾನಿಯಾಗಿದೆ.

ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಗುಡುಗು, ಸಿಡಿಲು ಸಹಿತ ಅಬ್ಬರದ ಮಳೆಯಾಗಿದೆ. ಹಲವು ಭಾಗದಲ್ಲಿ ಮಳೆಯಿಂದ ಹಾನಿ ಸಂಭವಿಸಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *