ಅನ್ನದಾತರ ಟ್ರ್ಯಾಕ್ಟರ್ ಕದ್ದು ಬೇರೆ ರೈತರಿಗೆ ಲೀಸ್‍ಗೆ ಬಿಡ್ತಿದ್ದ ಕಳ್ಳ ಅಂದರ್

Public TV
1 Min Read

ಬೆಂಗಳೂರು: ರೈತರ ಬಳಿ ಟ್ರ್ಯಾಕ್ಟರ್ ಕದ್ದು ರೈತರಿಗೆ ಟ್ರ್ಯಾಕ್ಟರ್ ಅನ್ನು ಲೀಸಿಗೆ ಬಿಡುತ್ತಿದ್ದ ಕಿಲಾಡಿ ಕಳ್ಳನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಕಳ್ಳನನ್ನು ಮೂಲತ ಮಂಡ್ಯ ಜಿಲ್ಲೆಯ ಕೆಂಬಳ್ಳಿ ಗ್ರಾಮದ ಬೋರೇಗೌಡ ಎಂದು ಗುರುತಿಸಲಾಗಿದೆ. ಈತನ ಜೊತೆ ಇನ್ನೊಬ್ಬ ಕಳ್ಳ ಕೂಡ ಶಾಮಿಲಾಗಿದ್ದು, ಆತ ಈಗ ಎಸ್ಕೇಪ್ ಆಗಿದ್ದಾನೆ. ಆತನ ಬಂಧನಕ್ಕೂ ಬಲೆ ಬೀಸಿರುವ ಪೊಲೀಸರು ಸದ್ಯ 55 ಲಕ್ಷ ಮೌಲ್ಯದ 12 ಟ್ರಾಕ್ಟರ್, 1 ಕಾರು, 1 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಳ್ಳರು ಬೆಂಗಳೂರು ಸುತ್ತಾಮುತ್ತಾ ರೈತರಿಂದ ಟ್ರ್ಯಾಕ್ಟರ್ ಕದ್ದು, ಅವುಗಳನ್ನು ಮಂಡ್ಯದ ಕಡೆಗೆ ತೆಗೆದುಕೊಂಡು ಹೋಗಿ ಅಲ್ಲಿ ರೈತರ ಅಲೆಮನೆ ಗದ್ದೆಗಳಿಗೆ ಲೀಸ್‍ಗೆ ಕೋಡುತ್ತಿದ್ದರು ಎನ್ನಲಾಗಿದೆ. ಬಾಡಿಗೆ ಹಣ ಕಡಿಮೆ ಎನ್ನುವ ಉದ್ದೇಶದಿಂದ ರೈತರು ಕೂಡ ಕಳ್ಳರ ಬಳಿ ಯಾವುದೇ ದಾಖಲೆ ಕೇಳದೇ ಟ್ರ್ಯಾಕ್ಟರ್ ಅನ್ನು ಲೀಸ್‍ಗೆ ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *