ಮನೆಯವರ ವಿರುದ್ಧವೇ ಮಾತಾಡಲಾಗದೆ ಹೆಚ್‍ಡಿಡಿ ಸುಮ್ಮನಾಗಿದ್ದಾರೆ: ಸಿಎಸ್.ಪುಟ್ಟೇಗೌಡ

Public TV
1 Min Read

ಹಾಸನ: ಜಿಲ್ಲೆಯ ಕೀಲಿಕೈ ಯಾರೋ ಒಬ್ಬರ ಕೈಲಿದ್ದು, ಆ ಕೀಲಿಕೈ ಕಿತ್ತುಕೊಂಡರೆ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಂತೆ ಹಾಸನ ಜಿಲ್ಲೆಗೆ ಸ್ವಾತಂತ್ರ್ಯ ಸಿಗಲಿದೆ ಎಂದು ಮಾಜಿ ಶಾಸಕ ಪುಟ್ಟೇಗೌಡ ಮಾಜಿ ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶ್ರೀನಿವಾಸಪುರದಲ್ಲಿರುವ ಹೇಮಾವತಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ಮಾಜಿ ಶಾಸಕ ಪುಟ್ಟೇಗೌಡ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಹಾಸನ ಜಿಲ್ಲೆಯ ಈ ಸ್ಥಿತಿಗೆ ಅವರ ಮನೆಯವರೇ ಕಾರಣ ಎಂದು ವಾಗ್ದಾಳಿ ನಡೆಸಿದ್ರು.

ಈ ಕೀಲಿಕೈ ಅವರಿಗೆ ಕೊಟ್ಟು ಜಿಲ್ಲೆಯ ಜನ ಶಿಕ್ಷೆ ತಗೊಂಡ್ರು. ಎಲ್ಲರಿಗಿಂತ ಮೊದಲು ದೇವೇಗೌಡರೇ ಶಿಕ್ಷೆ ತಗೊಂಡ್ರು. ಈ ವಯಸ್ಸಲ್ಲಿ ಅವರ ಮನೆಯವರ ವಿರುದ್ಧ ಅವರೇ ಮಾತನಾಡಲಾಗದೇ ದೇವೇಗೌಡರು ಸುಮ್ಮನಾಗಿದ್ದಾರೆ. ಕೈ ಮದ್ದು ಹಾಕುವವರು ಬೇರೆಯವರು ಸಿಗದಿದ್ರೆ ತಮ್ಮ ಮನೆಯವರಿಗೇ ಹಾಕುತ್ತಾರೆ. ಅದರಂತೆ ಈ ಜಿಲ್ಲೆಯಲ್ಲಿ ನಿಮ್ಮನ್ನು ಸೋಲಿಸಲು ಯಾರಿದ್ದರು ದೇವೇಗೌಡರೇ. ಈ ಕೀ ಪಿನ್‍ನಿಂದ ಸಣ್ಣಪುಟ್ಟ ಹುಡುಗರಿಗೆಲ್ಲ ಅಧಿಕಾರ ಸಿಕ್ಕಿದೆ. ಆದರೆ ಕೀ ಪಿನ್ ನಿಯಂತ್ರಿಸಲಾಗದೆ ದೇವೇಗೌಡರು ತುಮಕೂರಿಗೆ ಹೋಗುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯ್ತು ಎಂದು ವ್ಯಂಗ್ಯವಾಡಿದ್ರು.

ಈ ಕೀ ಪಿನ್ನನ್ನು ಸಿಂಹದ ಮರಿಗಳಾದ ಸಿದ್ಧರಾಮಯ್ಯ, ಡಿಕೆ.ಶಿವಕುಮಾರ್, ಖರ್ಗೆಗೆ ಕೊಡಲು ಹಾಸನ ಜಿಲ್ಲೆಯ ಜನ ಸಿದ್ಧರಾಗಿದ್ದಾರೆ. ಅವರುಗಳು ಬಂದು ಹಾಸನ ಜಿಲ್ಲೆಯನ್ನು ಶುದ್ಧಿ ಮಾಡಲಿದ್ದಾರೆ ಎಂದು ಪುಟ್ಟೇಗೌಡ ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *