ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಐರನ್ ಮ್ಯಾನ್, ಹಿಡಿದ ಕೆಲ ಬಿಡುವುದಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಇಂದು ಕಂಠೀರವ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ 2021 ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಭಾಷಣ ಪ್ರಾರಂಭ ಮಾಡಿದರು. ಅಮಿತ್ ಶಾ ಐರನ್ ಮ್ಯಾನ್. ಅವ್ರು ಹಿಡಿದ ಕೆಲಸ ಬಿಡೋದಿಲ್ಲ. ಗುಜರಾತ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಿದ್ದಾರೆ. ನವ ಭಾರತ ನಿರ್ಮಾಣದ ಕೆಲಸ ಮೋದಿ, ಅಮಿತ್ ಶಾ ಮಾಡ್ತಿದ್ದಾರೆ ಎಂದು ತಿಳಿಸಿದರು.
ಖೇಲೋ ಇಂಡಿಯಾ ಪ್ರಧಾನಿಗಳ ಕಲ್ಪನೆ ಕ್ರೀಡಾಕೂಟ ಆಗಿದೆ. ಕೊರೊನಾದಿಂದ ಎರಡು ವರ್ಷ ಕ್ರೀಡಾಕೂಟ ನಡೆದಿರಲಿಲ್ಲ. ಇದೀಗ ಅತ್ಯಂತ ಯಶಸ್ವಿಯಾಗಿ ಕ್ರೀಡಾಕೂಟ ಮುಗಿದಿದೆ. 209 ವಿವಿಯ 3800 ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗವಹಿಸಿದ್ದಾರೆ. ಎರಡು ರಾಷ್ಟ್ರೀಯ ದಾಖಲೆ ಕ್ರೀಡಾಕೂಟದಲ್ಲಿ ದಾಖಲಾಗಿದೆ ಎಂದರು.
ಯೋಗ ಮತ್ತು ಮಲ್ಲಕಂಬ ಈ ಬಾರಿ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ಮೋದಿ ಅವರ ಕರೆ ಮೇರೆಗೆ ಇಡೀ ವಿಶ್ವ ಯೋಗ ದಿನ ಆಚರಣೆ ಮಾಡುತ್ತದೆ. ಕಳೆದ ಕ್ರೀಡಾಕೂಟದ 76 ರೆಕಾರ್ಡ್ ಈ ಕ್ರೀಡಾಕೂಟದಲ್ಲಿ ಬ್ರೇಕ್ ಆಗಿದೆ. ಶಿವ ಶ್ರೀಧರ್ ಜೈನ್ ವಿವಿ 7 ಚಿನ್ನದ ಪದಕ ಪಡೆದಿದ್ದಾರೆ. ಇಂದು ಕಬ್ಬಡ್ಡಿ ಫೈನಲ್ ನಾನು ವೀಕ್ಷಣೆ ಮಾಡಿದೆ. ಕೆಲ ಆಟಗಾರರಿಗೆ ಪ್ರೊ ಕಬ್ಬಡ್ಡಿಯಲ್ಲಿ ಆಕ್ಷನ್ ನಲ್ಲಿ ಭಾಗವಹಿಸಲು ಸೇರಿಸಲಾಗಿದೆ. ಕರ್ನಾಟಕ ಸರ್ಕಾರ ಬೆಂಗಳೂರಿಗೆ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದರು.
ಇದೇ ವೇಳೆ ಜೈನ್ ವಿವಿ 20 ಚಿನ್ನದ ಪದಕ ಪಡೆದಿದೆ. 200 ಮೀಟರ್ ಓಟದಲ್ಲಿ ಒಲಂಪಿಯನ್ ದ್ಯುತಿ ಚಾಂದ್ ಸೋಲಿಸಿ ಪ್ರಿಯಾ ಮೋಹನ್ ಚಿನ್ನದ ಪದಕ ಪಡೆದಿದ್ದಾರೆ ಎಂದು ಖೇಲೋ ಇಂಡಿಯಾದ ಸಾಧಕರ ವಿವರ ಹೇಳಿದರು. ಕಾರ್ಯಕ್ರಮದಲ್ಲಿ ಅಮಿತ್ ಶಾ, ನಟ ಸುದೀಪ್, ಸಂಸದ ತೇಜಸ್ವಿಸೂರ್ಯ, ಸಿಎಂ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಸಚಿವ ನಾರಾಯಣಗೌಡ, ಆರಗ ಜ್ಞಾನೇಂದ್ರ, ಸಂಸದ ಪಿಸಿ ಮೋಹನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.