ಪುಣೆ: ಮಹಾರಾಷ್ಟ್ರದ ಗಾಮವೊಂದರ ಕಬ್ಬಿನ ಗದ್ದೆಯಲ್ಲಿ ಹಾವನ್ನು ಸಾಯಿಸಲು ಹಚ್ಚಿದ್ದ ಬೆಂಕಿಯಲ್ಲಿ 5 ಚಿರತೆ ಮರಿಗಳು ಸುಟ್ಟು ಸಜೀವ ದಹನವಾಗಿದೆ. ಪುಣೆಯ ಅಂಬೆಗಾಂವ್ ತಾಲೂಕಿನ ಗವಡೆವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬುಧವಾರ ಕಬ್ಬು ಕಟಾವು ಕಾರ್ಯ ನಡೆಸುತ್ತಿದ್ದ ವೇಳೆ ಗದ್ದೆಯಲ್ಲಿ ಒಟ್ಟು ಮಾಡಿಟ್ಟಿದ್ದ ಕಸದ ರಾಶಿ ಬಳಿ ವಿಷಕಾರಿ ಹಾವು ಕಂಡುಬಂದಿದ್ದು, ಭಯಗೊಂಡ ರೈತರು ಕಸಕ್ಕೆ ಬೆಂಕಿ ಹಚ್ಚಿದ್ದಾರೆ.
ಕಸಕ್ಕೆ ಹಚ್ಚಿದ್ದ ಬೆಂಕಿ ಪಕ್ಕದಲ್ಲೇ ಇದ್ದ ಪೊದೆಗೂ ತಗುಲಿದೆ. ಪರಿಣಾಮ ಅದರಲ್ಲಿ ಮಲಗಿದ್ದ ಮೂರು ಹೆಣ್ಣು ಮತ್ತು ಎರಡು ಗಂಡು ಚಿರತೆ ಮರಿಗಳು ಬೆಂಕಿಗೆ ಸುಟ್ಟು ಸಾವನ್ನಪ್ಪಿವೆ.
ಕಾಡಿನ ಸಮೀಪದಲ್ಲಿ ಈ ಕಬ್ಬಿನ ಗದ್ದೆ ಇರುವ ಕಾರಣಕ್ಕೆ ಕಳೆದ ಮೂರು ವಾರಗಳ ಹಿಂದೆ ಚಿರತೆ ಮರಿಗಳು ಜನಿಸಿರಬಹುದು. ಚಿರತೆ ಮರಿಗಳು ಪೊದೆಯಲ್ಲಿದ್ದ ವಿಚಾರ ಗ್ರಾಮಸ್ಥರಿಗೆ ತಿಳಿದಿರಲಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
Maharashtra: 5 leopard cubs were found dead in a sugarcane farm in Awasari village near Junnar tehsil of Pune today. Workes say, "We had come here to cut the harvest. Owner told us to burn the trash on field, we didn't know the cubs were there. A woman spotted them later&told us" pic.twitter.com/fSQccuJSoq
— ANI (@ANI) April 3, 2019
ಈ ಮರಿಗಳಿಗಾಗಿ ತಾಯಿ ಚಿರತೆ ಹುಡುಕಿ ಬರುವ ಸಾಧ್ಯತೆ ಇದ್ದು, ಸುತ್ತಮುತ್ತಲಿನ ಜನರಿಗೆ ಜಾಗ್ರತೆಯಿಂದ ಇರುವಂತೆ ಅರಣ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.