ನಾಗ ಚೈತನ್ಯರಿಂದ ಡಿವೋರ್ಸ್ ಪಡೆದ ನಂತರ ಸಮಂತಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೆಳೆತಿಯರ ಜೊತೆ ದೇಶ ಸುತ್ತುತ್ತಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಬದುಕುತ್ತಾ ಇರುವ ಸ್ಯಾಮ್ ಗೆ ಮನೆಯಲ್ಲಿ ಮದುವೆ ಒತ್ತಡ ಶುರುವಾಗಿದೆಯಂತೆ. ಡಿವೋರ್ಸ್ ಆಗಿರುವುದರಿಂದ ಮತ್ತೊಂದು ಮದುವೆ ಆಗಲು ಸಮಂತಾಗೆ ಅವರ ಕುಟುಂಬ ಒತ್ತಡ ಹೇರುವುದಕ್ಕೆ ಶುರು ಮಾಡಿದೆಯಂತೆ.
ಸಮಂತಾಗೆ ಎರಡನೇ ಮದುವೆ ಒತ್ತಡ ಹೇರುವ ಸುದ್ದಿ ತೆಲುಗು ಸಿನಿಮಾ ರಂಗದಲ್ಲಿ ಬೇರೊಂದು ರೀತಿಯ ಆಯಾಮ ಪಡೆದುಕೊಂಡಿದೆ. ತಾವು ಮುಂದೆ ಮತ್ತೆ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಮಕ್ಕಳು ಆಗದೇ ಇರುವಂತ ಚಿಕಿತ್ಸೆಗೆ ಸಮಂತಾ ಒಳಗಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದು ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿದೆ. ಇದನ್ನೂ ಓದಿ:ಕಿಚ್ಚ ಸುದೀಪ್ ಮನೆ ಮುಂದೆ ಅಭಿಮಾನಿಗಳ ಮಹಾಸಾಗರ: ಹ್ಯಾಪಿ ಬರ್ತ್ ಡೇ ಕಿಚ್ಚ
ಮತ್ತೊಂದು ಮದುವೆಗೆ ಇಷ್ಟವಿರದೇ ಇರುವ ಕಾರಣಕ್ಕಾಗಿ ಸಮಂತಾ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ನಿಜವೋ ಗಾಸಿಪ್ ಇರಬಹುದೋ? ಒಟ್ಟಿನಲ್ಲಿ ತೆಲುಗು ಸಿನಿಮಾ ರಂಗದಲ್ಲಿ ಈ ಸುದ್ದಿ ಬುಸುಗುಡುತ್ತಿದೆ. ಸಮಂತಾ ಹಾಗೆ ಮಾಡಿಕೊಳ್ಳುವುದಕ್ಕೆ ಸಾಧ್ಯವೆ? ಎನ್ನುವ ಮಾತೂ ಕೇಳಿ ಬರುತ್ತಿವೆ. ಸತ್ಯವೋ ಸುಳ್ಳೋ ಸಮಂತಾ ಯಾವುದೇ ಕಾರಣಕ್ಕೂ ಹಾಗೆ ಮಾಡಿಕೊಳ್ಳಲಾರರು ಎನ್ನುತ್ತಾರೆ ಅವರ ಅಭಿಮಾನಿಗಳು.