– ಸುಮಲತಾ ಒಂದು ಫೋನ್ ಮಾಡಿದ್ರೆ ಸಮಸ್ಯೆ ಪರಿಹಾರ
– ಸಹೋದರಿಗೆ ನ್ಯಾಯ ಕೊಡಿಸಿ
ಚೆನ್ನೈ: ನಟಿ ಜಯಪ್ರದಾ ಅವರ ಕುಟುಂಬದಿಂದ ನನ್ನ ಅಕ್ಕನಿಗೆ ಮೋಸ ಆಗಿದೆ. 15 ವರ್ಷಗಳಿಂದ ಯಾವುದೇ ಜೀವನಾಂಶ ಕೊಟ್ಟಿಲ್ಲ, ದಯಮಾಡಿ ಯಾರಾದ್ರೂ ಸುಮಲತಾ ಅವರ ಜೊತೆ ಮಾತನಾಡಿಸಿ ಅಂತ ವೀಡಿಯೋದಲ್ಲಿ ನಟಿ ವಿಜಯಲಕ್ಷ್ಮೀ ಹೇಳಿದ್ದಾರೆ.
15 ವರ್ಷಗಳಿಂದ ನಾವು ತಮಿಳುನಾಡಲ್ಲಿ ಇದ್ದೇವೆ. ಸೋದರಿ ಉಷಾದೇವಿ ಅವರು ವಿಚ್ಛೇದನ ಹಾಕಬೇಕು ಎಂದರೆ ನಾವು ಇಲ್ಲಿಂದಲೇ ಮಾಡಬೇಕಿದೆ. ಹೀಗಾಗಿ ನಾವು ಇಲ್ಲಿಯೇ 15 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗುತ್ತಿದೆ. ಉಷಾದೇವಿ ಅವರಿಗೆ ನ್ಯಾಯವನ್ನು ಕೊಡಿಸಬೇಕು. ದಯಮಾಡಿ ಸುಮತಲಾ ಅಂಬರೀಶ್ ಅವರ ಗಮನಕ್ಕೆ ಈ ವಿಚಾರವನ್ನು ತನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.
15 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡ ಜಯಪ್ರದಾ ಅವರು 15 ವರ್ಷಗಳಿಂದ ಸೋದರಿಯ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ. ಈ ಕುರಿತಾಗಿ ನನಗೆ ತುಂಬಾ ನೋವು ಇದೆ. ಈ ವಿಚಾರವನ್ನು ನಾವು ಯವಗ ಕೋರ್ಟ್ಗೆ ತೆಗೆದುಕೊಂಡು ಹೋದರು ರಾಜ್ಬಾಬು ಅವರು ಕೊರ್ಟ್ಗೆ ಬರುವುದಿಲ್ಲ. ಚಿತ್ರರಂಗದಲ್ಲಿ ಇರುವ ಹಿರಿಯರನ್ನು ಇಟ್ಟುಕೊಂಡು ಮಾತನಾಡೋಣ ಎಂದರೆ ಅದು ಸಾಧ್ಯವಾಗುತ್ತಿಲ್ಲ. ಅವರು ಕರ್ನಾಟಕದವರು ಕನ್ನಡದ ಹಿರಿಯರೊಂದಿಗೆ ಮಾತನಾಡಲು ಹೇಳಿ ಎಂದು ಹೇಳುತ್ತಿದ್ದಾರೆ. ಈ ನೋವನ್ನು ನಾವು 15 ವರ್ಷಗಳಿಂದ ಹೋತ್ತುಕೊಂಡು ಬರುತ್ತಿದ್ದೇವೆ. ಈ ವಿಚಾರವನ್ನು ಹೇಗೆ ಅಂತ್ಯಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದಿದ್ದಾರೆ.
ಸೋದರಿ ಉಷಾದೇವಿ ಆರೋಗ್ಯ ಬಹಳ ಗಂಭೀರವಾಗಿದೆ. ಚಿಕಿತ್ಸೆಗೆ ತುಂಬಾ ಹಣ ಖರ್ಚಾಗುತ್ತದೆ. ಸಹಾಯ ಮಾಡಿ ಎಂದು ನಾನು ವೀಡಿಯೋವನ್ನು ಹಾಕುವಾಗ ತುಂಬಾ ಟೀಕೆ ಆಗುತ್ತಿದೆ. ಉಷಾದೇವಿ ಅವರ ಮಗನನ್ನು ನೋಡಿ 15 ವರ್ಷಗಳಾಗಿವೆ. ಹಲವರಿಗೆ ವಿಚ್ಛೇದನವಾಗಿದೆ. ಅವರೆಲ್ಲ ಆ ಕಷ್ಟವನ್ನು ದಾಟಿಕೊಂಡು ಬಂದು ಜೀವನ ನಡೆಸುತ್ತಿದ್ದಾರೆ. ಆದರೆ ಉಷಾದೇವಿ ಅವರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅಂಬರೀಶ್ ಅವರನ್ನು ನಾನು ಸಂಪರ್ಕಿಸಲು ಪ್ರಯತ್ನಿಸಿದೆ ಆದರೆ ಅದು ಸಾಧ್ಯವಾಗಲಿಲ್ಲ. ಈ ವೀಡಿಯೋನ ದಯವಿಟ್ಟು ಸಂಸದೆ ಸುಮಲತಾ ಅವರಿಗೆ ತಲುಪಿಸಿ. ಅವರು ಒಂದು ಫೋನ್ ಮಾಡಿದರೆ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ. ದಯಮಾಡಿ ಯಾರಾದರೂ ಸುಮಲತಾ ಅವರ ಜೊತೆ ಮಾತನಾಡಿಸಿ ಅಂತ ವಿಜಯಲಕ್ಷ್ಮಿ ವೀಡಿಯೋದಲ್ಲಿ ಮನವಿ ಮಾಡಿದ್ದಾರೆ.