ಪಾಟ್ನಾ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ಬ್ಯೂರೋ ದಾಳಿ ಮುಂದುವರಿಸಿದೆ. ಎಂಜಿನಿಯರಿಂಗ್ ಮನೆಯ ಮೇಲೆ ದಾಳಿ ಮಾಡಿದ್ದು 60 ಲಕ್ಷ ರೂ. ಪತ್ತೆಯಾಗಿದೆ.
ಇಂದ್ರಪುರಿ ಪ್ರದೇಶದಲ್ಲಿರುವ ಗ್ರಾಮೀಣ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅಜಯ್ ಕುಮಾರ್ ಸಿಂಗ್ ಅವರು ಅಕ್ರಮವಾಗಿ ಆಸ್ತಿಯನ್ನು ಸಂಪಾದಿಸುತ್ತಿದ್ದಾರೆ ಎಂಬ ಮಾಹಿತಿ ವಿಜಿಲೆನ್ಸ್ ಬ್ಯೂರೋಗೆ ಸಿಕ್ಕಿತ್ತು. ಇದನ್ನೂ ಓದಿ: MES ಪುಂಡರಿಗೆ ತಕ್ಕ ಶಾಸ್ತಿ ಆಗಲಿದೆ: ಸುನಿಲ್ ಕುಮಾರ್
ಈ ಹಿನ್ನೆಲೆ ಅಧಿಕಾರಿಗಳು ಅಜಯ್ ಅವರ ಬಗ್ಗೆ ಎಲ್ಲ ರೀತಿಯ ಮಾಹಿತಿಯನ್ನು ಹಂತ-ಹಂತವಾಗಿ ಸಂಗ್ರಹಿಸಿದ್ದಾರೆ. ನಂತರ ವಿಜಿಲೆನ್ಸ್ ಬ್ಯೂರೋ ನಿನ್ನೆ ಅಜಯ್ ಅವರ ಮನೆ ಮೇಲೆ ದಾಳಿಯನ್ನು ಮಾಡಿದೆ. ಇದನ್ನೂ ಓದಿ: ಕಪ್ಪು ಬಟ್ಟೆ ಮೇಲೆ MES ಎಂದು ಬರೆದು ಚಪ್ಪಲಿ ಏಟು ಕೊಟ್ಟ ರಾಯಣ್ಣನ ಅಭಿಮಾನಿಗಳು
ಅಧಿಕಾರಿಗಳು ಅಜಯ್ ಅವರ ಮನೆಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ದಾಳಿಯನ್ನು ಮಾಡಿದ್ದಾರೆ. ಈ ವೇಳೆ ಅವರಿಗೆ 60 ಲಕ್ಷ ರೂ.ಗೂ ಹೆಚ್ಚು ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಭೂ ಹೂಡಿಕೆ ಪತ್ರಗಳು ಮತ್ತು ಇತರ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.