– ಬನ್ನೇರುಘಟ್ಟದಿಂದ ಬಂದ ಸುಚಿತ್ರಾ, ಯಶ್ವಂಥ್
– ಆರಕ್ಕೇರಿದ ಸಿಂಹಗಳ ಸಂಖ್ಯೆ
ಶಿವಮೊಗ್ಗ: ನೈಸರ್ಗಿಕ ಅರಣ್ಯದ ಮಧ್ಯೆ ಇರುವ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಎರಡು ಹೊಸ ಅತಿಥಿಗಳು ಆಗಮಿಸಿದ್ದು, ಸಿಂಹಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಬನ್ನೇರುಘಟ್ಟದಿಂದ ಶಿವಮೊಗ್ಗದ ಮೃಗಾಲಯಕ್ಕೆ ಏಳು ವರ್ಷದ ಸುಚಿತ್ರಾ ಮತ್ತು ಯಶ್ವಂಥ್ ಎಂಬ ಹೆಸರಿನ ಎರಡು ಸಿಂಹಗಳನ್ನು ಕರೆ ತರಲಾಗಿದೆ. ಈಗಾಗಲೇ ಮೃಗಾಲಯದಲ್ಲಿ ಆರ್ಯ, ಮಾನ್ಯ, ಸುಶ್ಮಿತಾ ಹಾಗೂ ಸರ್ವೇಶ್ ಎಂಬ ನಾಲ್ಕು ಸಿಂಹಗಳಿದ್ದವು. ಇದೀಗ ಆ ಕುಟುಂಬಕ್ಕೆ ಇನ್ನೆರಡು ಸಿಂಹಗಳು ಹೊಸದಾಗಿ ಸೇರ್ಪಡೆಯಾಗಿವೆ.
ಈ ಹಿಂದೆಯೇ ಹುಲಿ ಮತ್ತು ಸಿಂಹಧಾಮಕ್ಕೆ ಹೊಸ ಸಿಂಹಗಳನ್ನು ತರುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಿಂಹಗಳನ್ನು ತರಲು ಸಾಧ್ಯವಾಗಿರಲಿಲ್ಲ. ಈಗ ಆ ಯೋಜನೆ ಈಡೇರಿದಂತಾಗಿದೆ. ಇದನ್ನೂ ಓದಿ: ಕಾಲಿಗೆ ಮಾಸ್ಕ್ ಸಿಕ್ಕಿಸಿಕೊಂಡು ಟ್ರೋಲ್ ಆದ ಸಚಿವ