ಬೆಂಗಳೂರು: ಕಳೆದ ಎರಡು ದಿನದ ಹಿಂದೆ ಮನೆಯ ಬಳಿ ಆಟವಾಡುತಿದ್ದ ಪ್ರೀತಿಯ ಶ್ವಾನ ನಾಪತ್ತೆಯಾಗಿದ್ದು, ಮುದ್ದಿನ ಶ್ವಾನ ಕಳೆದು ಹೋಗಿದಕ್ಕೆ ಕುಟುಂಬಸ್ಥರು ಬೇಸರಗೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಇತ್ತ ಸಹಪಾಠಿ ಗುಂಡನ ನಾಪತ್ತೆಯಿಂದ ಉಳಿದ ಶ್ವಾನಗಳು ಸಹ ಊಟ ಮಾಡದೆ ನೀರು ಕುಡಿಯದೇ ಮಂಕಾಗಿ ಹೋಗಿವೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಹರ್ಷ ಕ್ಯಾಂಪಸ್ ನಿಂದ ಶ್ವಾನ ನಾಪತ್ತೆಯಾಗಿದೆ. ಹರ್ಷ ವಿದ್ಯಾಸಂಸ್ಥೆಗಳ ಮಾಲೀಕ ಶಿವಕುಮಾರ್ ಅವರ ಸಾಕು ನಾಯಿ ಗುಂಡ ನಾಪತ್ತೆಯಾಗಿದೆ.
ಕಳೆದ ಒಂದೂವರೆ ವರ್ಷದಿಂದ ಗುಂಡನನ್ನು ಶಿವಕುಮಾರ್ ಮುದ್ದಾಗಿ ಸಾಕಿದ್ದರು. ಬಿಳಿ, ಕಪ್ಪು ಬಣ್ಣದ ಗುಂಡ ಕಳೆದ ಶನಿವಾರದಿಂದ ನಾಪತ್ತೆಯಾಗಿದ್ದಾನೆ. ಹೀಗಾಗಿ ಹುಡುಕಿ ಕೊಟ್ಟವರಿಗೆ 10,000 ಇನಾಮು ನೀಡಲು ತೀರ್ಮಾನ ಮಾಡಿದ್ದಾರೆ. ಶ್ವಾನದ ಮಾಲೀಕ ಯಶಸ್ ಮಾತನಾಡಿ ಪ್ಲೀಸ್ ಯಾರಿಗಾದರೂ ಸಿಕ್ಕಿದರೆ ನಮಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.