ಬಿಗ್ಬಾಸ್, ಈ ಸೀಸನ್ನಲ್ಲಿ ಮೊದಲ ಬಾರಿಗೆ ವೀಕ್ಷಕರಿಗೆ ಸ್ಪರ್ಧಿಗಳ ಜೊತೆಗೆ ಮಾತನಾಡಲು ಅವಕಾಶ ನೀಡಲಾಗಿತ್ತು.
ಅದರಂತೆ ಜನಾರ್ದನ್ ಎಂಬವರು ಕರೆ ಮಾಡಿ, ನಾನು ಪ್ರತಿ ದಿನ ಬಿಗ್ಬಾಸ್ ಫಾಲೋ ಮಾಡುತ್ತಿದ್ದೇನೆ. ನನ್ನ ಪ್ರಶ್ನೆ ದಿವ್ಯಾ ಸುರೇಶ್ರವರಿಗೆ ಅಂತಾ ಹೇಳಿ, ನೀವು ಬಹಳ ಚೆನ್ನಾಗಿ ಆಟ ಆಡುತ್ತಿದ್ದೀರಾ. ನೀವು ಯಾರನ್ನೋ ಫಾಲೋ ಮಾಡಿ ಆಟ ಆಡುತ್ತಿದ್ದೀರಾ ಎಂಬ ಆರೋಪಗಳು ಕೇಳಿಬರುತ್ತಿದ್ದರೂ ತಲೆ ಕೆಡಿಸಿಕೊಳ್ಳದೇ ಈಗ ನೀವು ಇಂಡಿಪೆಂಡೆಂಟ್ ಆಗಿ ಆಟ ಆಡುತ್ತಿದ್ದೀರಾ.
ಆದರೆ ಮೊನ್ನೆ ನಡೆದ ಲವ್ ಲೆಟರ್ ಟಾಸ್ಕ್ ವೇಳೆ, ಬೇರೆಯವರು ಬರೆದ ಲೆಟರ್ನನ್ನು ನೀವು ಹುಡುಕುವುದಕ್ಕೆ ನಿಧಿ ಅವರಿಗೆ ಸಹಾಯ ಮಾಡಿದ್ರಿ. ಕೊನೆಗೆ ನಿಮ್ಮ ಹತ್ತಿರ ಅತೀ ಹೆಚ್ಚು ಲೆಟರ್ಸ್ ಉಳಿಯಿತು. ಇದಕ್ಕೆ ಕಾರಣ ನಿಧಿಯವರು ಹೆಲ್ಪ್ ಮಾಡಿದ್ದು ಎಂದು ನಿಮಗೆ ಅನಿಸುವುದಿಲ್ವಾ ಅಂತಾ ಕೇಳುತ್ತಾರೆ.
ಆಗ ದಿವ್ಯಾ ಸುರೇಶ್, ನಾನು ಕೆಲವೊಂದಷ್ಟು ಪತ್ರವನ್ನು ಮಂಜು ಸಹಾಯದಿಂದ ಮೇಲಕ್ಕೆ ಎತ್ತಿಟ್ಟೆ. ಆದರೆ ನಾನು ಸೇವ್ ಮಾಡಿದ್ದು ಕೇವಲ 5-6 ಲೆಟರ್ ಮಾತ್ರ. ನಾನು ಆಟ ಆಡುವ ವೇಳೆ ನಿಧಿಯವರು ಬಂದು ಈ ರೀತಿ ಆಫರ್ ಮಾಡಿದರು. ಇದನ್ನು ನಾನು ಮಂಜು ಜೊತೆ ಚರ್ಚಿಸಿ ನಂತರ ನಿರ್ಧರಿಸಿದೆ ಎಂದು ಉತ್ತರಿಸುತ್ತಾರೆ.
ಹಾಗದರೆ ಕ್ಯಾಪ್ಟನ್ಸಿ ಟಾಸ್ಕ್ ಬಂದಾಗ ನಿಮಗೆ ಎಲ್ಲರ ಮೇಲೂ ಕೋಪ ಬಂದಿದ್ದು ಯಾಕೆ ಎಂಬ ಪ್ರಶ್ನೆಗೆ, ಇಲ್ಲ ನನಗೆ ಕೋಪ ಏನು ಬಂದಿಲ್ಲ. ಬಹುಶಃ ನನಗೆ ಇವರು ಅತ್ಯುತ್ತಮ ಆಟಗಾರ್ತಿ ಕೊಟ್ಟರು. ಆದರೆ ಅತ್ಯುತ್ತಮ ನೀಡಿದ್ದು ತಪ್ಪು ಎಂದು ಕೆಲವರು ಹೇಳಿದಾಗ ಬೇಜಾರಾಯಿತೇ ಹೊರತು ಒಬ್ಬರಲ್ಲದೇ ಇನ್ನೂ ಎಲ್ಲರೂ ಬಂದಿದ್ದರು ನನಗೆ ಬೇಸರವಾಗುತ್ತಿರಲಿಲ್ಲ ಎಂದು ದಿವ್ಯಾ ಸುರೇಶ್ ಸ್ಪಷ್ಟಪಡಿಸಿದರು.
ಒಟ್ಟಾರೆ ಬಾಯ್ಸ್ ಹಾಸ್ಟೆಲ್ ವರ್ಸಸ್ ಗಲ್ಸ್ ಹಾಸ್ಟೆಲ್ ಟಾಸ್ಕ್ನಲ್ಲಿ ನಡೆದ ಯಾರೂ ಊಹಿಸಲಾಗದ ಮೋಸವನ್ನು ಕೇಳಿ ಮನೆಮಂದಿಯಲ್ಲಿ ಶಾಕ್ ಆಗುತ್ತಾರೆ.