ಮೈಸೂರು: ಜಿಲ್ಲೆಯ ಜನರ ಬಳಿ ಕ್ಷಮೆ ಕೇಳಬೇಕು ಎಂದ ಜಿಲಾಧಿಕಾರಿ ರೋಹಿಣಿ ಸಿಂಧೂರಿಗೆ ಮಾಜಿ ಸಚಿವ ಸಾರಾ ಮಹೇಶ್ ಅವರು ಪ್ರಶ್ನೆಗಳ ಸುಮಳೆಗೈದರು.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡಿಗ, ದಲಿತ ಅಧಿಕಾರಿಯನ್ನು ಒಂದೇ ತಿಂಗಳಲ್ಲಿ ಎತ್ತಂಗಡಿ ಮಾಡಿಸಿ ಆ ಸ್ಥಾನಕ್ಕೆ ಬಂದಿದ್ದು ಸತ್ಯ ಅಲ್ವಾ?, ಸಿಎಟಿ ಅನ್ನೇ ಮ್ಯಾನೇಜ್ ಮಾಡಿ ಇಲ್ಲಿ ಉಳಿದು ಕೊಂಡಿದ್ದು ಸತ್ಯ ಅಲ್ವಾ?, ಸ್ವಿಮಿಂಗ್ ಫ್ಹುಲ್ ಕಟ್ಟಿ ಕೊಂಡಿದ್ದು ಸತ್ಯ ಅಲ್ವಾ?, 200 ಕೋಟಿ ಸರಕಾರ ದ ಹಣನಾ ತಿರುಪತಿ ಕೊಟ್ಟಿದ್ದು ಸತ್ಯ ಅಲ್ವಾ?, ಇಬ್ಬರು ಐಎಎಸ್ ಅಧಿಕಾರಿಗಳ ಅವಿವೇಕದಿಂದ ಇಡೀ ರಾಜ್ಯ ಹೊತ್ತಿ ಉರಿಯಿತು. ಇಷ್ಟೆ ಅಲ್ಲ ಅದರೂ ನಮ್ಮ ಕೈಯಲ್ಲಿ ವ್ಯವಸ್ಥೆ ಬದಲಾಯಿಸಲು ಆಗಲಿಲ್ಲ ಅಂತಾ ನಾವು ಜನರ ಕ್ಷಮೆ ಕೇಳಬೇಕಿದೆ. ಆರೋಪ ಬಂದ ಅಧಿಕಾರಿಗಳನ್ನು ಇಟ್ಟುಕೊಂಡು ಸತ್ಯ ಹುಡುಕಿದರೆ ಸತ್ಯ ಹೊರಬರುತ್ತದಾ ಎಂದು ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಹಾಕಿದ್ದಾರೆ.
ಲಾಕ್ ಡೌನ್ ಹಿನ್ನೆಲೆ ಬಡ ಶ್ರಮಿಕ ವರ್ಗದವರಿಗೆ ಆರ್ಥಿಕವಾಗಿ ಸಹಾಯ ಮಾಡಿ. ಶಾಸಕರ ಒಂದು ವರ್ಷದ ವೇತನ ಹಿಡಿದು ಕೊಂಡು ಶ್ರಮಿಕ ವರ್ಗದ ವರಿಗೆ ಆರ್ಥಿಕ ಸಹಾಯ ಮಾಡಿ. ಮೈಸೂರಿನಲ್ಲಿ ಟೆಸ್ಟಿಂಗ್ ಕಡಮೆ ಮಾಡಲಾಗಿದೆ. ಇದರಿಂದ ಪಾಸಿಟಿವ್ ಸಂಖ್ಯೆ ಕಡಮೆ ಆಗುತ್ತಿದೆ. ಕೊರೊನಾ ಇಳಿಮುಖ ಆಗುತ್ತಿದೆ ಎಂದು ತೋರಿಸಲು ಈ ರೀತಿ ಟೆಸ್ಟ್ ಕಡಮೆ ಮಾಡಲಾಗಿದೆ ಎಂದು ಇದೇ ವೇಳೆ ಮಾಜಿ ಸಚಿವರು ಗಂಭೀರ ಆರೋಪ ಮಾಡಿದರು.
ರೋಹಿಣಿ ಸಿಂಧೂರಿ ಹೇಳಿದ್ದೇನು..?
ಈ ಹಿಂದೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿಸಿ, ಚಾಮರಾಜನಗರ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪೋರ್ಟ್ ನೋಡಿದ್ದೀರಾ? ನಾವು ಬಂದ ದಿನದಿಂದ ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಿಲ್ಲ, ಅದು ನನ್ನ ಕೆಲಸವೂ ಅಲ್ಲ. ನಮ್ಮ ಮೇಲೆ ಆರೋಪ ಮಾಡಲು ಹೋಗಿ ಮೈಸೂರಿಗೆ ಕಳಂಕ ತರಲು ಪ್ರಯತ್ನಿಸಿದ್ದರು. ಅದರಿಂದ ನಾವು ಮುಕ್ತರಾಗಿದ್ದೇವೆ. ಆದರೆ ಕಳಂಕ ತರಲು ಪ್ರಯತ್ನಿಸಿದವರು ಮೈಸೂರು ಜನರ ಕ್ಷಮೆ ಕೇಳಬೇಕು. ನಮ್ಮ ಮೇಲೆ ಮಾಡಿದ ಆರೋಪ ಸುಳ್ಳು ಮತ್ತು ಆಧಾರ ರಹಿತ. ಸರ್ಕಾರ ಕೇಳಿದ ಎಲ್ಲ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದರು.