ಮೈಸೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆ ಯುವಕ ಮೇ 8 ನೇ ತಾರೀಖು ತನ್ನ ಅತ್ತೆ ಮಗಳನ್ನು ಮದುವೆ ಆಗಬೇಕಿತ್ತು. ಆದರೆ, ವಿಧಿಯಾಟ ಬೇರೆ ಇತ್ತು. ಮದುವೆ ಕಾರ್ಡ್ ಹಂಚಲು ಮೈಸೂರಿಗೆ ಬಂದ ಅವನನ್ನು ಹಳೆ ಪ್ರಿಯತಮೆ ಪತ್ತೆ ಹಚ್ಚಿ ಮೇ 3 ರಂದು ದಿಢೀರನೆ ಅವನಿಂದ ದೇವಸ್ಥಾನದಲ್ಲಿ ತಾಳಿ ಕಟ್ಟಿಸಿಕೊಂಡಳು. ಇದರಿಂದ ಮನನೊಂದ ಯುವಕ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹೀಗೆ ಸಾವಿಗೆ ಶರಣಾದ ಯುವಕನ ಹೆಸರು ಮಠಪತಿ. ಕೆಎಸ್ಆರ್ಟಿಸಿ ಕಂಡಕ್ಟರ್ ಆಗಿರೋ ಮಠಪತಿಗೆ ತನ್ನ ಅತ್ತೆ ಮಗಳ ಜೊತೆ ಮೇ 8 ರಂದು ರಾಣೆಬೆನ್ನೂರಿನಲ್ಲಿ ಮದುವೆ ನಿಶ್ಚಿಯವಾಗಿತ್ತು. ಇದಕ್ಕಾಗಿ ಸ್ನೇಹಿತರನ್ನು ಕರೆಯಲು ಮಠಪತಿ ಮೈಸೂರಿಗೆ ಬಂದಿದ್ದರು. ಆಗ, ಬೆಂಗಳೂರಿನಲ್ಲಿ ತಾನು ಡಿಎಡ್ ಓದುವಾಗ ಪ್ರೀತಿಸುತ್ತಿದ್ದ ಕಾವ್ಯಶ್ರೀ ಕಣ್ಣಿಗೆ ಬಿದ್ದಿದ್ದಾರೆ.
ಕಾವ್ಯಶ್ರೀ ಈಗ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದಾರೆ. ಕಾವ್ಯಶ್ರೀ ಅಪ್ಪ-ಅಮ್ಮ ಮೈಸೂರಲ್ಲೆ ಇದ್ದಾರೆ. ಹೀಗಾಗಿ, ಮೊನ್ನೆ ಮೈಸೂರಿಗೆ ಬಂದಿದ್ದ ಮಠಪತಿಯನ್ನು ಪತ್ತೆಹಚ್ಚಿದ ಕಾವ್ಯಶ್ರೀ, ತನ್ನನ್ನು ಮದುವೆ ಆಗುವಂತೆ ಒತ್ತಾಯಿಸಿ ಮೇ 3 ರಂದು ಮೈಸೂರಿನ ದೇವಸ್ಥಾನದಲ್ಲಿ ಮದುವೆ ಆಗಿದ್ದಾಳೆ. ಇದರಿಂದ ಬೇಸತ್ತ ಮಠಪತಿ ತಾನು ಉಳಿದಿದ್ದ ಮನೆಯಲ್ಲೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.