ತುಮಕೂರು: ಆಸ್ತಿಗೋಸ್ಕರ ಗಂಡ ಬದಕಿದ್ರು ಸತ್ತೋಗಿದ್ದಾನೆ ಅಂತ ಊರಿಗೆಲ್ಲಾ ಕರೆದು ತಿಥಿ ಊಟ ಹಾಕಿಸಿರೋ ವಿಲಕ್ಷಣ ಘಟನೆ ತುಮಕೂರಿನಲ್ಲಿ ನಡೆದಿದೆ.
ಗುಬ್ಬಿ ತಾಲೂಕಿನ ಸಿಎಸ್ ಪುರದ ರಾಮಚಂದ್ರಯ್ಯ 30 ವರ್ಷಗಳ ಹಿಂದೆ ಜಯಮ್ಮ ಅನ್ನೋರನ್ನ ಮದ್ವೆಯಾಗಿದ್ರು. 5 ಕೋಟಿಗೂ ಹೆಚ್ಚು ಬೆಲೆಬಾಳೋ ಆಸ್ತಿ ಹೊಂದಿರೋ ಇವರಿಗೆ ಮದ್ವೆ ವಯಸ್ಸಿಗೆ ಬಂದಿರೋ ಇಬ್ಬರು ಮಕ್ಕಳು ಇದ್ದಾರೆ.
ಆದ್ರೆ ಜಯಮ್ಮ ಆಸೆ ಮಾತ್ರ ಆನೆ ಗಾತ್ರದ್ದು. ಗಂಡನಿಗೆ ಸ್ವಲ್ಪ ಅನಾರೋಗ್ಯ ಹಿಡಿದಿದ್ದೇ ತಡ ಅವರನ್ನ ಮನೆಯಿಂದ ಹೊರಹಾಕಿ, ತನ್ನ ಪ್ರಿಯಕರ ಹಾಗೂ ತನ್ನ ಸಂಬಂಧಿಕರ ಜೊತೆ ಸೇರಿಕೊಂಡು ಆಸ್ತಿ ಲಪಟಾಯಿಸಲು ಗಂಡನ ಹೆಸರಲ್ಲಿ ಊರಿಗೆಲ್ಲಾ ತಿಥಿ ಊಟ ಹಾಕಿಸಿ ಮಜಾ ಮಾಡ್ತಿದ್ದಾರೆ.
ಈ ವಿಷಯ ಗೊತ್ತಾಗಿ ಗಂಡ ಊರಿಗೆ ಬಂದ್ರೆ ಅವರನ್ನ ಬೆದರಿಸಿ ಹಲ್ಲು ಮುರಿಯುವ ಹಾಗೆ ಹೊಡೆದು 10 ವರ್ಷ ಇತ್ತ ತಲೆ ಹಾಕದಂತೆ ನೋಡಿಕೊಂಡ್ರು. ಕಡೆಗೆ ಈ ವಿಷಯ ಊರಿಗೆಲ್ಲಾ ಗೊತ್ತಾಗಿ ಜಯಮ್ಮಳಿಗೆ ಜನರೇ ಛೀಮಾರಿ ಹಾಕಿದ್ದಾರೆ.
ಸದ್ಯ ಗಂಡ ರಾಮಚಂದ್ರ ನಾನು ಬದುಕಿದ್ದೀನಿ ಅಂತ ಪ್ರೂವ್ ಮಾಡೋಕೆ ಅವರಿಗೆ ಶಿಕ್ಷೆ ಕೊಡಿಸೋಕೆ ಹೋರಾಡ್ತಿದ್ದಾರೆ.