ಪಾಟ್ನಾ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಹೋದರ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಜೀವಂತವಾಗಿ ಸುಟ್ಟ ದಾರುಣ ಘಟನೆ ಭಾನುವಾರ ರಾತ್ರಿ ಬಿಹಾರದಲ್ಲಿ ನಡೆದಿದೆ.
ಬಿಹಾರದ ಕತಿಹಾರ್ ಜಿಲ್ಲೆಯಯಲ್ಲಿ ಈ ಘಟನೆ ಸಂಭವಿಸಿದೆ. ಕೇದಾರ್ ಸಿಂಗ್(45) ಪತ್ನಿ ಪ್ರತಿಮಾ ದೇವಿ(40) ಅವರ ಇಬ್ಬರು ಪುತ್ರಿಯರಾದ ಡಿಂಪಲ್ ಕುಮಾರಿ(15) ಮತ್ತು ಸೋನಿ(17) ಮೃತಪಟ್ಟವರು. ಕೋಣೆಯಲ್ಲಿ ಮಲಗಿದ್ದ ಮಗ ಲಕ್ಷ್ಮಣ್ ಕುಮಾರ್ ಸಿಂಗ್(12) ಘಟನೆಯಿಂದ ಪಾರಾಗಿದ್ದಾನೆ.
ಕೇದಾರ್ ಸಿಂಗ್ ಮತ್ತು ಆತನ ಸಹೋದರನ ಮಧ್ಯೆ ಪೂರ್ವಜರ ಆಸ್ತಿ ವಿಷಯದ ಬಗ್ಗೆ ಜಗಳವಿತ್ತು. ಹೀಗಾಗಿ ಈ ಆಸ್ತಿ ದ್ವೇಷದಿಂದ ಕೇದಾರಸಿಂಗ್ ಹಾಗೂ ಆತನ ಕುಟುಂಬಸ್ಥನ್ನ ಮನೆಯಲ್ಲಿ ಮಲಗಿದ್ದ ವೇಳೆ ಹೊರಗಡೆಯ ಬಾಗಿಲ ಕೊಂಡಿಯನ್ನು ಲಾಕ್ ಮಾಡಿ ಮನೆಗೆ ಬೆಂಕಿ ಹಚ್ಚಿದ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
ಆ ವೇಳೆ ಬೆಂಕಿ ಹತ್ತಿದಾಗ ಎಚ್ಚರಗೊಂಡ ಕೇದಾರ್ ಸಿಂಗ್ ಕಿರುಚಾಡಿತೊಡಗಿದ್ದಾರೆ. ಕೇದಾರ್ ಸಿಂಗ್ ಸಹೋದರ ಬಾಗಿಲು ಲಾಕ್ ಮಾಡಿದ್ದರಿಂದ ಒಳಗಿದ್ದವರನ್ನು ಕಾಪಾಡಲು ಆಗದಿದ್ದಾಗ ಮನೆಯಲ್ಲಿ ಸುಟ್ಟು ಹೋಗಿದ್ದರು.
ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗ ಲಕ್ಷ್ಮಣ್ ಸಿಂಗ್ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೇದಾರ್ ಸಿಂಗ್ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈಗ ಆರೋಪಿ ಕೇದಾರ್ ಸಿಂಗ್ ನಾಪತ್ತೆಯಾಗಿದ್ದಾನೆ.