ತುಮಕೂರು: ಇತ್ತೀಚೆಗೆ ತುಮಕೂರು ನಗರದ ದಂಪತಿ ಸಾಕಿದ್ದ ಮುದ್ದಿನ ಗಿಳಿಯೊಂದು ಕಾಣೆಯಾಗಿದ್ದ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಆ ದಂಪತಿ ಗಿಳಿಗಳ ವಿಷಯದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಎರಡು ಗಿಳಿಗಳನ್ನು ಗುಜರಾತ್ನ ಸರ್ದಾರ್ ಪಟೇಲ್ ಝುವಾಲಜಿಕಲ್ ಪಾರ್ಕ್ನಲ್ಲಿ ಬಿಟ್ಟು ಬಂದಿದ್ದಾರೆ.
ತುಮಕೂರು ನಗರದ ಜಯನಗರದ ದಂಪತಿ ಅರ್ಜುನ್ ಹಾಗೂ ರಂಜನಾ ಅವರ ಮುದ್ದಿನ ಗಿಳಿಯಲ್ಲಿ ಒಂದಾದ ರುಸ್ತುಮಾ ಈ ಹಿಂದೆ ಅಚಾನಕ್ಕಾಗಿ ಹಾರಿ ಹೋಗಿತ್ತು. ಆಗ ಗಿಳಿಯನ್ನು ಹುಡುಕಿಕೊಟ್ಟವರಿಗೆ ಬರೋಬ್ಬರಿ 85 ಸಾವಿರ ರೂ. ಬಹುಮಾನವನ್ನೂ ಕೊಟ್ಟಿದ್ದರು. ಆದರೆ ಇದೀಗ ಅರ್ಜುನ್-ರಂಜನಾ ದಂಪತಿಯೇ ಸ್ವತಃ ಗಿಳಿಗಳನ್ನು ಹಾರಿ ಬಿಟ್ಟಿದ್ದಾರೆ. ಇದನ್ನೂ ಓದಿ: ಸುತ್ತೂರು ಮಠ ಧರ್ಮನಿಷ್ಠೆ, ಸಕರಾತ್ಮಕ ಶಕ್ತಿಗೆ ಪ್ರಸಿದ್ಧಿ: ರಾಜ್ಯಪಾಲ ಗೆಹ್ಲೋಟ್ ಶ್ಲಾಘನೆ
ಹಾಗಂತ ಬೇಕಾಬಿಟ್ಟಿಯಾಗಿ ತಮ್ಮ ಪ್ರೀತಿಯ ಗಿಳಿಯನ್ನು ಬೀದಿಪಾಲು ಮಾಡಿಲ್ಲ. ತಾವು ನೋಡಿಕೊಳ್ಳುವುದಕ್ಕಿಂತಲೂ ಅದು ಸುರಕ್ಷಿತವಾಗಿರಲಿ ಎಂದು ಸುರಕ್ಷಿತ ತಾಣಕ್ಕೆ ಇವರೇ ಬಿಟ್ಟು ಬಂದಿದ್ದಾರೆ. ತಮ್ಮ ಗಿಳಿಗಳನ್ನು ಗುಜರಾತ್ನ ಸರ್ದಾರ್ ಪಟೇಲ್ ಝುವಾಲಜಿಕಲ್ ಪಾರ್ಕ್ನಲ್ಲಿ ಬಿಟ್ಟಿದ್ದಾರೆ. ಮತ್ತೆ ಈ ಗಿಳಿಗಳು ಹಾರಿ ಹೋಗಿ ಇತರೆ ಪ್ರಾಣಿಗಳ ಆಹಾರ ಆಗುವುದಕ್ಕಿಂತ ಪಾರ್ಕ್ನಲ್ಲಿ ಸುರಕ್ಷಿತವಾಗಿರಲಿ ಎಂದು ಬಿಟ್ಟು ಬಂದಿದ್ದಾರೆ. ಈ ಗಿಳಿಗಳನ್ನು ಪಾರ್ಕ್ಗೆ ಬಿಟ್ಟು ಬರಲು 8 ದಿನಗಳ ಕಾಲ ಕಾರಿನಲ್ಲಿ ಜರ್ನಿ ಮಾಡಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಆತ್ಮಹತ್ಯೆಗೆ ಶರಣು