ಬಳ್ಳಾರಿ: ವಿಶ್ವವಿಖ್ಯಾತ ಹಂಪಿಗೆ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಭೇಟಿ ನೀಡಿ ಕುಟುಂಬ ಸಮೇತವಾಗಿ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ರು.
ಹಂಪಿಯ ವಿರೂಪಾಕ್ಷೇಶ್ವರನ ದರ್ಶನ ಪಡೆದು ದೇವಸ್ಥಾನದಲ್ಲಿನ ವಾಸ್ತು ಶಿಲ್ಪ ವೀಕ್ಷಣೆ ಮಾಡಿದ್ರು. ನಂತರ ಹಂಪಿಯ ಜನತಾ ಪ್ಲಾಟ್ ನಲ್ಲಿರುವ ಖಾಸಗಿ ಹೊಟೆಲ್ ನಲ್ಲಿ ಊಟ ಮಾಡಿದ್ರು. ಈ ವಿಷಯ ತಿಳಿದು ಅಲ್ಲು ಅರ್ಜುನ್ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ರು.
ಇದೇ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನೊಂದಿಗೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ರು. ಇದರಿಂದಾಗಿ ಅಭಿಮಾನಿಗಳ ಮಧ್ಯೆ ಸಿಕ್ಕ ಅಲ್ಲು ಅರ್ಜುನ್ ಫಜೀತಿ ಪಡಬೇಕಾಯಿತು. ಪೊಲೀಸರು ಹರಸಾಸಹಸಪಟ್ಟು ಅಭಿಮಾನಿಗಳನ್ನ ನಿಯಂತ್ರಿಸಿದ್ರು.