ರಾಯಚೂರು: ಸೂಪರ್ ಸ್ಟಾರ್ ರಜನಿಕಾಂತ್ ದಿಢೀರನೆ ಮಂತ್ರಾಲಯದಲ್ಲಿ ಪ್ರತ್ಯಕ್ಷವಾಗಿ ರಾಯರ ದರ್ಶನ ಪಡೆದು ಮರಳಿದ್ದಾರೆ.
ಸಿಬ್ಬಂದಿಗಳಿಗೂ ಪೂರ್ವ ಮಾಹಿತಿಯಿಲ್ಲದೆ ಮಠಕ್ಕೆ ಬೆಳಗಿನ ಜಾವ 6.30 ಕ್ಕೆ ಆಗಮಿಸಿದ ರಜನಿ ಮೂಲರಾಮದೇವರ ದರ್ಶನ, ರಾಯರ ವೃಂದಾವನ ದರ್ಶನ ಮಾಡಿ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ರಿಂದ ಆಶೀರ್ವಚನ ಪಡೆದು 7.30 ಕ್ಕೆ ಮಠದಿಂದ ತೆರಳಿದ್ದಾರೆ.
ಮಠದ ಸಿಬ್ಬಂದಿ ರಜನಿ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಮಠದೊಳಗೆ ಬಂದ ಮೇಲೆ ನಟ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ರಿಂದ ಮಠದ ಮ್ಯಾನೇಜರ್ ರನ್ನ ಸಂಪರ್ಕ ಮಾಡಿರುವ ರಜಿನಿಕಾಂತ್ ಕೆಲವೇ ನಿಮಿಷಗಳ ಕಾಲ ಮಠದಲ್ಲಿದ್ದು ಬಳಿಕ ಅಲ್ಲಿಂದ ತೆರಳಿದ್ದಾರೆ.