ಕೊಪ್ಪಳ: ಮಗ ತೀರಿಕೊಂಡ 9ನೇ ದಿನದ ತಿಥಿ ಕಾರ್ಯದ ದಿನದಂದೇ ತಾಯಿಯೂ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.
ರವಿಕುಮಾರ್, ಮಾಬಮ್ಮ ನಿಧನರಾಗಿದ್ದು ಇವರು ಕುಷ್ಟಗಿ ಪಟ್ಟಣದ ಅಂಬೇಡ್ಕರ್ ಬೀದಿ ನಿವಾಸಿಗಳು. ಆಗಸ್ಟ್ 9 ರಂದು ರವಿಕುಮಾರ್ ಎಂಬವರು ರಕ್ತದೊತ್ತಡ ಕಾಯಿಲೆಯಿಂದ ನಿಧನವಾಗಿದ್ದರು. ನಿನ್ನೆ ಶಿವಗಣಾರಧನೆ ಸಂದರ್ಭದಲ್ಲಿ ಅವರ ತಾಯಿ ಮಾಬಮ್ಮಗೆ ಹೃದಯಾಘಾತ ಕಾಣಿಸಿಕೊಂಡಿದ್ದು, 9 ದಿನಗಳ ಅಂತರದಲ್ಲೇ ತಾಯಿ – ಮಗ ಇಬ್ಬರೂ ಮೃತಪಟ್ಟಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ದ್ವೇಷದ ಕಸಕ್ಕೆ ಹೋಲಿಸಿದ ನಿರ್ದೇಶಕ ಡಿಲನ್ ಮೋಹನ್ ಗ್ರೇ
ತಾಯಿ ನಿಧನ ಸುದ್ದಿ ಕೇಳಿ ಮತ್ತಿಬ್ಬರು ಮಕ್ಕಳೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಕ್ತದೊತ್ತಡದಿಂದ ಗದಗ ಜಿಲ್ಲೆಯ ಗಜೇಂದ್ರಗಡ ತಹಶೀಲ್ದಾರ್ ಆಗಿರೋ ರಜನಿಕಾಂತ್ ಕೆಂಗಾರಿ ಹಾಗೂ ಸಹೋದರ ನಾಗರಾಜ್ ಕೆಂಗಾರಿ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.