ರಾಯಚೂರು: ವೀರಶೈವ ಮತ್ತು ಲಿಂಗಾಯತ ಸಮಾಜದವರ ನಡುವೆ ಬೆಂಕಿ ಹಚ್ಚಿ ಅವರ ಜಗಳದಲ್ಲಿ ಸಿಎಂ ಸಿದ್ದರಾಮಯ್ಯ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಅಂತ ಮಾಜಿ ಸಂಸದ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ವಿಶ್ವನಾಥ್ ಇತ್ತೀಚಿನ ಶತಮಾನದಲ್ಲಿ ಯಾವ ಹೊಸ ಧರ್ಮಗಳು ಹುಟ್ಟಿರುವ ಉದಾಹರಣೆ ಇಲ್ಲ. ಸಂವಿಧಾನದಲ್ಲಿ ಹೊಸ ಧರ್ಮಕ್ಕೆ ಅವಕಾಶ ಇಲ್ಲ. ಚುನಾವಣೆ ಹತ್ತಿರ ಬಂದಿರುವುದರಿಂದ ಧರ್ಮದ ಹೆಸರಿನಲ್ಲಿ ಸಿದ್ದರಾಮಯ್ಯ ಬೆಂಕಿ ಹಚ್ಚಿದ್ದಾರೆ. ಸಮಾಜದವರು ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು ಎಂದು ಅವರು ಹೇಳಿದರು.
ಇನ್ನೂ ಅಹ್ಮದ್ ಪಟೇಲ್ ಒಬ್ಬ ದುರಹಂಕಾರಿ ಮನುಷ್ಯ. ಅವರನ್ನ ಗೆಲ್ಲಿಸಲು ಕರ್ನಾಟಕದಲ್ಲಿ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಣ್ಮರೆಯಾಗಿದ್ದ ಕೆಟ್ಟ ಸಂಸ್ಕೃತಿ ಮತ್ತೆ ಕಾಣಿಸಿಕೊಂಡಿದೆ ಅಂತ ಎಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.