ವಿಜಯಪುರ: ಬಿಜೆಪಿಯವರು ಬಡ್ಡಿ ನನ್ನಮಕ್ಳು ಅಂತ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಅವರು ಹೀಯಾಳಿಸಿ ಬೈದಿದ್ದಾರೆ.
ನಗರದ ಜೆ.ಬಿ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ಲಾಕ್ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ದೇಶ ಭಕ್ತಿ ಬಿಜೆಪಿಯವರಿಗೆ ಮಾತ್ರವಿಲ್ಲ. ಕಾಂಗ್ರೆಸ್ಸಿಗರ ರಕ್ತ ಕಣ-ಕಣದಲ್ಲಿ ದೇಶ ಭಕ್ತಿ ಹರಿಯುತ್ತಿದೆ ಎಂದು ಹೇಳಿದರು.
ಬಡ್ಡಿ ಮಕ್ಳು ಬಿಜೆಪಿಯವರಿಂದ ದೇಶ ಭಕ್ತಿಯ ಬಗ್ಗೆ ನಾವು ಕಲಿಯಬೇಕಿಲ್ಲ. ಯಾವಾಗಲೂ ಬರೀ ಸುಳ್ಳು ಹೇಳುವುದೇ ಅವರ ಕೆಲಸ ಎಂದು ಬಿಜೆಪಿಯವರ ವಿರುದ್ಧ ಹರಿಹಾಯ್ದರು.
ಸಚಿವರು ಭಾಷಣದಲ್ಲಿ ಬಡ್ಡಿ ಮಕ್ಳು ಶಬ್ಧ ಬಳಸಿದಕ್ಕೆ ಬಿಜೆಪಿಯಲ್ಲಿ ವಿರೋಧ ಕೇಳಿ ಬಂದಿದೆ.