ಚೆನ್ನೈ: ತಮಿಳುನಾಡಿನಲ್ಲಿ ಮತ್ತೊಂದು ಕನ್ನಡ ವಿರೋಧಿ ಹೋರಾಟ ಆರಂಭವಾದಂತಿದೆ. ಕನ್ನಡಿಗ ರಜನೀಕಾಂತ್ ರಾಜಕೀಯದಿಂದ ದೂರ ಉಳಿಯಬೇಕೆಂದು ತಮಿಳು ಪರ ಸಂಘಟನೆಗಳು ಪಟ್ಟು ಹಿಡಿದಿವೆ.
ರಜನಿ ರಾಜಕೀಯ ಪ್ರವೇಶ ವಿರೋಧಿಸಿ ರಸ್ತೆಗೆ ಇಳಿದಿರುವ ತಮಿಳು ಸಂಘಟನೆಗಳು ರಜನೀಕಾಂತ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿವೆ. ಅಲ್ಲದೇ ರಜನೀಕಾಂತ್ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದ್ದು, ನಿವಾಸದ ಬಳಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ತಮಿಳುನಾಡು ಕಾಂಗ್ರೆಸ್ ಕಮಿಟಿ ಅಧ್ಯಕ್ಷ ತಿರುನಾವುಕ್ಕರಸರ್ ರಜನೀಕಾಂತ್ ರಾಜಕೀಯ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ರಜನೀಕಾಂತ್ ಹೊಸ ಪಕ್ಷವನ್ನು ಸ್ಥಾಪನೆ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
“ರಜನೀಕಾಂತ್ ಅವರನ್ನು 35- 40 ವರ್ಷಗಳಿಂದ ತಿಳಿದ ವ್ಯಕ್ತಿಯೊಬ್ಬರು ನನಗೆ ತಿಳಿಸಿದ ಮಾಹಿತಿ ಪ್ರಕಾರ ರಜನೀಕಾಂತ್ ಯವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ. ಆದರೆ ಅವರೇ ಒಂದು ಪಕ್ಷವನ್ನು ಸ್ಥಾಪನೆ ಮಾಡುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ ಎನ್ನುವ ಮಾತನ್ನು ಮಾಧ್ಯಮಕ್ಕೆ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ.
ಅಭಿಮಾನಿಗಳ ಜೊತೆಗೆ ಕಳೆದ ವಾರ ನಡೆಸಿದ ಸಂವಾದದಲ್ಲಿ ರಜನೀಕಾಂತ್ ರಾಜಕೀಯಕ್ಕೆ ಬರುವ ಸುಳಿವು ನೀಡಿದ್ದರು. ನನ್ನನ್ನು ಅಪ್ಪಟ ತಮಿಳಿಗನಾಗಿ ರೂಪಿಸಿದ್ದಕ್ಕೆ ನಿಮಗೆ ಧನ್ಯವಾದ ಎಂದು ರಜನೀ ಹೇಳಿದ್ದರು.
ಇದನ್ನೂ ಓದಿ: ರಜನೀಕಾಂತ್ ರಾಜಕೀಯ ಎಂಟ್ರಿ ಪಕ್ಕಾ: ಮತ್ತೆ ಈ ಪ್ರಶ್ನೆ ಈಗ ಉದ್ಭವವಾಗಿದ್ದು ಏಕೆ?
Security increased at Rajinikanth's house as Tamilar Munnetra Padai protests on hints of him joining politics,say Kannadiga shouldnt rule TN pic.twitter.com/ZXfi7Cs1fm
— ANI (@ANI_news) May 22, 2017
Tamil Nadu: Tamilar Munnetra Padai protests near the residence of Rajinikanth in Chennai pic.twitter.com/1MlbNittJE
— ANI (@ANI_news) May 22, 2017