ಚಿಕ್ಕಬಳ್ಳಾಪುರ: ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವ ತೆರವುಗೊಳಿಸದ ಪರಿಣಾಮ ಶವದ ಮೇಲೆಯೇ ರೈಲು ಓಡಾಡಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ.
ಆನಂದಪುರ ಗ್ರಾಮದ 30 ವರ್ಷದ ಗಂಗಾಧರ ಎಂಬವರು ಇಂದು ಬೆಳಗ್ಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದ್ರೆ ಮಧ್ಯಾಹ್ನದವರೆಗೂ ಇವರ ಶವವವನ್ನು ತೆರವುಗೊಳಿಸದ ಕಾರಣ ರೈಲುಗಳು ಶವದ ಮೇಲೆಯೇ ಓಡಾಡಿವೆ. ಗಂಗಾಧರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಬೆಳಗ್ಗೆ ಸುಮಾರು 11 ಗಂಟೆಗೆ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಸಿಬ್ಬಂದಿ ಮಾತ್ರ ಸಂಜೆ 4.30 ಗಂಟೆಯ ವೇಳೆಯಲ್ಲಿ ದೇಹವನ್ನು ರೈಲು ಹಳಿಯಿಂದ ತೆಗೆದಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಶವದ ಮೇಲೆಯೇ ಸುಮಾರು 10 ರಿಂದ 15 ರೈಲುಗಳು ಓಡಾಟ ನಡೆಸಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಯಶವಂತಪುರ ರೈಲ್ವೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.